ಪುರಭವನ, ಮೌರ್ಯ ವೃತ್ತ, ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಶನಿವಾರ ಪ್ರತಿಭಟನೆ ನಡೆಸುವುದಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಜ್ಜಾಗಿದ್ದರು. ಈ ಸ್ಥಳಗಳಲ್ಲೆಲ್ಲ ಪೊಲೀಸ್ ಸರ್ಪಗಾವಲು ಇತ್ತು. ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕುವ ಮೂಲಕ ಹೆಚ್ಚು ಪ್ರತಿಭಟನಕಾರರು ಒಂದೆಡೆ ಸೇರದಂತೆ ಪೊಲೀಸರು ತಡೆದರು. ಅಲ್ಲಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್ ವ್ಯಾನ್ಗಳಲ್ಲಿ ಹಾಗೂ ಬಾಡಿಗೆಗೆ ಪಡೆದಿದ್ದ ಬಿಎಂಟಿಸಿ ಬಸ್ಗಳಲ್ಲಿ ಹೋರಾಟಗಾರರನ್ನು ತುಂಬಿಸಿದ ಪೊಲೀಸರು, ಠಾಣೆಗಳಿಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಿದರು.