ಇಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಂತರಿಕ ಭಿನ್ನಮತ ಎಂಬುದು ಸೆರಗಿನಲ್ಲಿ ಬೆಂಕಿಯನ್ನು ಕಟ್ಟಿಕೊಂಡಂತೆ. ಇದು ಉಲ್ಬಣಗೊಂಡರೆ ಮುಖ್ಯಮಂತ್ರಿ ದುರ್ಬಲಗೊಳ್ಳುತ್ತಾರೆ . ಸರ್ಕಾರ ಕೂಡ ದುರ್ಬಲಗೊಳ್ಳುತ್ತದೆ. ಇದರಿಂದ ಆಡಳಿತದಲ್ಲಿ ಶಿಥಿಲತೆ ಕಾಣಿಸಿಕೊಂಡು ಜನಹಿತ ಕಾರ್ಯಗಳಿಗೆ ಅಡಚಣೆ ಎದುರಾಗುತ್ತದೆ. ಭಿನ್ನಮತ ಎಂಬುದು ಒಟ್ಟು ಜನಮಾನಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದ್ದರಿಂದ ಭಿನ್ನಮತ ಮತ್ತೆ ಪುನರಾವರ್ತನೆ ಆಗದ ಹಾಗೆ ವರಿಷ್ಠರು ಆರಂಭದಲ್ಲಿ ಶಮನ ಗೊಳಿಸುವುದಕ್ಕೆ ಕಾಳಜಿ ವಹಿಸಬೇಕಾಗಿದೆ’ ಎಂದರು.