‘₹ 24 ಕೋಟಿ ವೆಚ್ಚದಲ್ಲಿ ಕಲಾಕ್ಷೇತ್ರದ ನವೀಕರಣ ಅಗತ್ಯವಿಲ್ಲ. ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಅನಿವಾರ್ಯವಲ್ಲ. ನವೀಕರಣ ಬಳಿಕ ಬಾಡಿಗೆ ಹೆಚ್ಚಿಸಲಾಗುತ್ತದೆ. ಅದನ್ನು ಭರಿಸಿ, ನಾಟಕ ಪ್ರದರ್ಶಿಸುವ ಶಕ್ತಿ ರಂಗಭೂಮಿಗಿಲ್ಲ. ಬದಲಾಗಿ, ಕೆಟ್ಟಿರುವ ಧ್ವನಿ–ಬೆಳಕಿನ ಪರಿಕರಗಳ ರಿಪೇರಿಗೆ ಕ್ರಮವಹಿಸಬೇಕು. ವೇದಿಕೆ ಮೇಲೆ ಹಾಕಲು ಆಲಂಕಾರಿಕ ಕುರ್ಚಿಗಳನ್ನು ನೀಡಬೇಕು. ವಾರ್ಷಿಕ ಶೇ 5ರಷ್ಟು ಬಾಡಿಗೆ ಹೆಚ್ಚಳ ಕೈಬಿಟ್ಟು, ಅಗತ್ಯ ಸಿಬ್ಬಂದಿ ನೇಮಿಸಬೇಕು’ ಎಂದು ರಂಗಕರ್ಮಿಗಳು ತಿಳಿಸಿದರು.