‘2020ರಲ್ಲಿ ವಿಶ್ವವಿದ್ಯಾಲಯವು ಹೊಸ ಶೈಕ್ಷಣಿಕ ಮತ್ತು ಪರೀಕ್ಷಾ ನಿಯಮಗಳನ್ನು ಅಳವಡಿಸಿಕೊಂಡಿದೆ. ಶೈಕ್ಷಣಿಕ ಮತ್ತು ಪರೀಕ್ಷಾ ನಿಯಮಗಳು–2009ರ ಪ್ರಕಾರ ಒಬ್ಬ ವಿದ್ಯಾರ್ಥಿಗೆ ವಿಶೇಷ ಮರು ಪರೀಕ್ಷೆಯ ರಿಯಾಯತಿ ನೀಡಲು ಸಾಧ್ಯವಿಲ್ಲ’ ಎಂದು ಎನ್ಎಲ್ಎಸ್ಐಯು ವಾದಿಸಿತ್ತು. ಆದರೆ, ವಿಶೇಷ ಮರು ಪರೀಕ್ಷೆ ನಡೆಸುವಂತೆ ಶಿಕ್ಷಣ ಸಂಸ್ಥೆಗೆ ನಿರ್ದೇಶನ ನೀಡಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಪೀಠ, ‘ಬಡವನಾಗಿರುವುದು ಹೇಗೆ ಅಪರಾಧವಲ್ಲವೋ, ಕಲಿಕೆಯಲ್ಲಿ ಹಿಂದುಳಿದಿರುವುದೂ ಹಾಗೆಯೇ’ ಎಂದು ಹೇಳಿದೆ.