ಸದಾಶಿವನಗರದಲ್ಲಿರುವ ಗೋದ್ರೆಜ್ ನೇಚರ್ ಬ್ಯಾಸ್ಕೆಟ್, ನಾಮ್ದಾರಿ ಫ್ರೆಶ್ ಹಾಗೂ ಬ್ರಿಗೇಡ್ ರಸ್ತೆಯಲ್ಲಿರುವ ನೀಲಗಿರಿ ಶಾಪಿಂಗ್ ಮಳಿಗೆಗಳ ಮೇಲೆ ಸುಧಾಕರ್ ನೇತೃತ್ವದ ತಂಡಬುಧವಾರ ದಿಢೀರ್ ದಾಳಿ ನಡೆಸಿತು. ಈ ವೇಳೆ ಹಣ್ಣು ಹಾಗೂ ತರಕಾರಿಗಳಿಗೆ ಪ್ಲಾಸ್ಟಿಕ್ ರ್ಯಾಪರ್ ಬಳಸಿರುವುದು ಕಂಡು ಬಂತು. ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದ ಮಂಡಳಿ ಅಧ್ಯಕ್ಷ, ಮಳಿಗೆಯ ಮೇಲೆ ಶಿಸ್ತುಕ್ರಮ ಕೈಗುಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.