120 ಕೋಟಿ ಜನಸಂಖ್ಯೆ ಇದ್ದರೂ 10 ಲಕ್ಷ ಜನರ ಪೈಕಿ ಅಂಗಾಂಗ ದಾನ ಮಾಡುವವರ ಸಂಖ್ಯೆ ಶೇಕಡ 0.08ರಷ್ಟು ಮಾತ್ರ ಇದೆ.ಸದ್ಯ ರಾಜ್ಯದಲ್ಲಿ 2,662 ಮಂದಿ ಕಿಡ್ನಿ ಕಸಿಗಾಗಿ ಕಾಯುತ್ತಿದ್ದಾರೆ. ಒಬ್ಬ ದಾನಿ ಹೃದಯ, ಮೂತ್ರಪಿಂಡ, ಯಕೃತ್ತು,ಮೇದೋಜ್ಜೀರಕ ಗ್ರಂಥಿ, ಶ್ವಾಸಕೋಶ ದಾನ ಮಾಡಬಹುದು. ಅಂಗಾಂಶ ದಾನದ ಮೂಲಕ 50ಕ್ಕೂ ಹೆಚ್ಚು ಜನರ ಜೀವವನ್ನು ಉಳಿಸಬಹುದು ಎಂದು ಸಂಸ್ಥೆ ಹೇಳಿದೆ.