ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಈ ಕಾರಣದಿಂದ ಈವರೆಗೆ ₹5.50 ಕೋಟಿ ನಷ್ಟವಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಹೇಳಿದೆ.
ಈವರೆಗೆ ಒಟ್ಟು 818 ಬಸ್ಗಳ ಸಂಚಾರ ರದ್ದು ಮಾಡಲಾಗಿದ್ದು, ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವವರ ಸಂಖ್ಯೆ ದಿನಕ್ಕೆ 5,500ಕ್ಕೆ ಕುಸಿದಿದೆ. ಈ ಮೊದಲು ದಿನಕ್ಕೆ 22 ಸಾವಿರದಿಂದ 23 ಸಾವಿರದವರೆಗೆ ಇರುತ್ತಿತ್ತು ಎಂದು ನಿಗಮ ತಿಳಿಸಿದೆ.
ಊಟಿ ಬಸ್ಗೆ ನಿರ್ಬಂಧ
ಊಟಿಯಿಂದ ನಗರ ಪ್ರವೇಶಿಸುವ ಬಸ್ಗಳಿಗೆ ನಿರ್ಬಂಧ ವಿಧಿಸಲಾಗಿದೆ. ತಕ್ಷಣದಿಂದ ಈ ನಿಯಮ ಜಾರಿಗೆ ಬಂದಿದ್ದು, ಮಾರ್ಚ್ 31ರವರೆಗೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮಗಳು
* ಬಸ್ಗಳ ಸ್ವಚ್ಛತಾ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲಾಗಿದೆ
* ಘಟಕಗಳಲ್ಲಿ ಸೋಂಕು ನಿವಾರಕಗಳನ್ನು ಇಡಲು ಸೂಚಿಸಲಾಗಿದೆ
* ಐಷಾರಾಮಿ ಬಸ್ಗಳಲ್ಲಿ ಹಾಸಿಗೆ ನೀಡುವ ಸೌಲಭ್ಯ ರದ್ದುಗೊಳಿಸಲಾಗಿದೆ