ಕೆ.ಎಸ್.ನರಸಿಂಹ ಸ್ವಾಮಿ ಟ್ರಸ್ಟ್ನ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ‘ಸಮಾಜದಲ್ಲಿ ಇಂದು ಎಲ್ಲೆಡೆ ದ್ವೇಷ, ಅಸಹನೆ, ಹಿಂಸೆ, ಸಿಟ್ಟು ತುಂಬಿದೆ. ಇಂತಹ ಹೊತ್ತಿನಲ್ಲಿ ಪ್ರೀತಿಯನ್ನು ಜೀವನ ಸಿದ್ಧಾಂತವಾಗಿ ಪ್ರತಿಪಾದಿಸಿದವರು ನರಸಿಂಹಸ್ವಾಮಿ. ಅವರು ಬದುಕಿಗೆ ಪ್ರೀತಿಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಪ್ರೀತಿ ಇದ್ದರೆ ದುಃಖ ಕೂಡ ಹಗುರವಾಗಿಬಿಡುತ್ತದೆ. ಪ್ರೀತಿಯು ಹಾಸ್ಯವಲ್ಲ ಅದೊಂದು ಸಿದ್ಧಾಂತ ಎಂಬುದನ್ನು ತಮ್ಮ ಕಾವ್ಯದ ಮೂಲಕ ತಿಳಿ ಹೇಳಿದ್ದಾರೆ’ ಎಂದರು.