<p><strong>ಬೆಂಗಳೂರು</strong>: ಸಾರಿಗೆ ನೌಕರರ ಮುಷ್ಕರ 9ನೇ ದಿನವಾದ ಗುರುವಾರವೂ ಮುಂದುವರಿದಿದ್ದು, ನಗರದಲ್ಲಿ ಬಿಎಂಟಿಸಿ ಬಸ್ಗಳಿಲ್ಲದೆ ಯುಗಾದಿ ಮುಗಿಸಿ ಮರಳಿದ ಪ್ರಯಾಣಿಕರು ಪರದಾಡಿದರು.</p>.<p>ಸಾಲು–ಸಾಲು ರಜೆಗಳನ್ನು ಮುಗಿಸಿ ಬಂದ ಪ್ರಯಾಣಿಕರು ಬೆಳಿಗಿನ ಜಾವದಿಂದಲೇ ನಗರಕ್ಕೆ ತಲುಪಿದರು. ಖಾಸಗಿ ಮತ್ತು ಸರ್ಕಾರಿ ಬಸ್ ಇಳಿದ ಪ್ರಯಾಣಿಕರು ಅಲ್ಲೊಂದು ಇಲ್ಲೊಂದು ಎಂಬಂತೆ ಓಡಾಡುತ್ತಿದ್ದ ಬಿಎಂಟಿಸಿ ಬಸ್ಗಳಿಗಾಗಿ ಕಾದರು.</p>.<p>ಆನೇಕಲ್, ಜಿಗಣಿ, ಚಂದಾಪುರ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆಗೆ ತೆರಳಲು ಖಾಸಗಿ ಬಸ್ಗಳಿದ್ದವು. ಆದರೆ, ಚಂದಾಪುರಕ್ಕೆ ತೆರಳಲು ಒಬ್ಬ ಪ್ರಯಾಣಿಕನಿಗೆ ₹ 100 ನಿಗದಿ ಮಾಡಲಾಗಿತ್ತು. ದರ ಹೆಚ್ಚಳದ ಬಗ್ಗೆ ಪ್ರಶ್ನಿಸಿದರೂ ಪ್ರಯೋಜನವಾಗದೆ ದುಬಾರಿ ದರದಲ್ಲೇ ಜನ ಪ್ರಯಾಣಿಸಿದರು.</p>.<p>‘ಮೂರು ಮಕ್ಕಳೊಂದಿಗೆ ಬಂದಿದ್ದೇವೆ. ಎಲೆಕ್ಟ್ರಾನಿಕ್ ಸಿಟಿಗೆ ತೆರಳಲು ₹ 500 ಬೇಕಾಗಿದೆ. ಕೂಲಿ ಕೆಲಸ ಮಾಡುವ ನಾವು ಅಷ್ಟೊಂದು ಹಣ ಎಲ್ಲಿಂದ ತರಬೇಕು’ ಎಂದು ದಂಪತಿ ಪ್ರಶ್ನಿಸಿದರು.</p>.<p>ಮನ ಬಂದಂತೆ ದರ ವಸೂಲಿ ಮಾಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಆರ್ಟಿಒ ಅಧಿಕಾರಿಗಳು, ಖಾಸಗಿ ಚಾಲಕರಿಗೆ ಎಚ್ಚರಿಕೆ ನೀಡಿದರು. ಹೆಚ್ಚು ದರ ಪಡೆಯುತ್ತಿದ್ದರೆ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.</p>.<p>‘ಸಾರಿಗೆ ಮುಷ್ಕರದ ಲಾಭವನ್ನು ಆಟೋ ಚಾಲಕರು ಪಡೆಯುತ್ತಿದ್ದಾರೆ. ಮೆಜೆಸ್ಟಿಕ್ನಿಂದ ನಿಮಾನ್ಸ್ಗೆ ತೆರಳಲು ಆಟೋ ಚಾಲಕರು ₹200 ಕೇಳುತ್ತಿದ್ದಾರೆ’ ಎಂದು ಸಾರ್ವಜನಿಕರು ದೂರಿದರು. ಮೆಟ್ರೊ ರೈಲಿನಲ್ಲೂ ಗುರುವಾರ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು. ಬೆಳಿಗ್ಗೆಯಿಂದಲೂ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದರು.</p>.<p class="Briefhead"><strong>ಮೇಣದ ಬತ್ತಿ ಹಿಡಿದು ಪ್ರತಿಭಟನೆ</strong><br />ಸಾರಿಗೆ ಮುಷ್ಕರದ ಅಂಗವಾಗಿ ನೌಕರರು ನಗರದಲ್ಲಿ ಗುರುವಾರ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.</p>.<p>ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಸಾರಿಗೆ ನೌಕರರ ಕೂಟ ನಿರ್ಧರಿಸಿತ್ತು. ಆದರೆ, ಅದಕ್ಕೆ ಪೊಲೀಸರು ಅನುಮತಿ ನೀಡದ ಕಾರಣ, ಗಾಂಧಿ ನಗರದಲ್ಲಿ ಮೇಣದ ಬತ್ತಿ ಹಿಡಿದು ಪ್ರತಿಭಟಿಸಿದರು.</p>.<p>ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದ್ ನೌಕರರ ಪ್ರತಿಭಟನೆಗೆ ಸಾಥ್ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸಾರಿಗೆ ನೌಕರರ ಮುಷ್ಕರ 9ನೇ ದಿನವಾದ ಗುರುವಾರವೂ ಮುಂದುವರಿದಿದ್ದು, ನಗರದಲ್ಲಿ ಬಿಎಂಟಿಸಿ ಬಸ್ಗಳಿಲ್ಲದೆ ಯುಗಾದಿ ಮುಗಿಸಿ ಮರಳಿದ ಪ್ರಯಾಣಿಕರು ಪರದಾಡಿದರು.</p>.<p>ಸಾಲು–ಸಾಲು ರಜೆಗಳನ್ನು ಮುಗಿಸಿ ಬಂದ ಪ್ರಯಾಣಿಕರು ಬೆಳಿಗಿನ ಜಾವದಿಂದಲೇ ನಗರಕ್ಕೆ ತಲುಪಿದರು. ಖಾಸಗಿ ಮತ್ತು ಸರ್ಕಾರಿ ಬಸ್ ಇಳಿದ ಪ್ರಯಾಣಿಕರು ಅಲ್ಲೊಂದು ಇಲ್ಲೊಂದು ಎಂಬಂತೆ ಓಡಾಡುತ್ತಿದ್ದ ಬಿಎಂಟಿಸಿ ಬಸ್ಗಳಿಗಾಗಿ ಕಾದರು.</p>.<p>ಆನೇಕಲ್, ಜಿಗಣಿ, ಚಂದಾಪುರ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆಗೆ ತೆರಳಲು ಖಾಸಗಿ ಬಸ್ಗಳಿದ್ದವು. ಆದರೆ, ಚಂದಾಪುರಕ್ಕೆ ತೆರಳಲು ಒಬ್ಬ ಪ್ರಯಾಣಿಕನಿಗೆ ₹ 100 ನಿಗದಿ ಮಾಡಲಾಗಿತ್ತು. ದರ ಹೆಚ್ಚಳದ ಬಗ್ಗೆ ಪ್ರಶ್ನಿಸಿದರೂ ಪ್ರಯೋಜನವಾಗದೆ ದುಬಾರಿ ದರದಲ್ಲೇ ಜನ ಪ್ರಯಾಣಿಸಿದರು.</p>.<p>‘ಮೂರು ಮಕ್ಕಳೊಂದಿಗೆ ಬಂದಿದ್ದೇವೆ. ಎಲೆಕ್ಟ್ರಾನಿಕ್ ಸಿಟಿಗೆ ತೆರಳಲು ₹ 500 ಬೇಕಾಗಿದೆ. ಕೂಲಿ ಕೆಲಸ ಮಾಡುವ ನಾವು ಅಷ್ಟೊಂದು ಹಣ ಎಲ್ಲಿಂದ ತರಬೇಕು’ ಎಂದು ದಂಪತಿ ಪ್ರಶ್ನಿಸಿದರು.</p>.<p>ಮನ ಬಂದಂತೆ ದರ ವಸೂಲಿ ಮಾಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಆರ್ಟಿಒ ಅಧಿಕಾರಿಗಳು, ಖಾಸಗಿ ಚಾಲಕರಿಗೆ ಎಚ್ಚರಿಕೆ ನೀಡಿದರು. ಹೆಚ್ಚು ದರ ಪಡೆಯುತ್ತಿದ್ದರೆ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.</p>.<p>‘ಸಾರಿಗೆ ಮುಷ್ಕರದ ಲಾಭವನ್ನು ಆಟೋ ಚಾಲಕರು ಪಡೆಯುತ್ತಿದ್ದಾರೆ. ಮೆಜೆಸ್ಟಿಕ್ನಿಂದ ನಿಮಾನ್ಸ್ಗೆ ತೆರಳಲು ಆಟೋ ಚಾಲಕರು ₹200 ಕೇಳುತ್ತಿದ್ದಾರೆ’ ಎಂದು ಸಾರ್ವಜನಿಕರು ದೂರಿದರು. ಮೆಟ್ರೊ ರೈಲಿನಲ್ಲೂ ಗುರುವಾರ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು. ಬೆಳಿಗ್ಗೆಯಿಂದಲೂ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದರು.</p>.<p class="Briefhead"><strong>ಮೇಣದ ಬತ್ತಿ ಹಿಡಿದು ಪ್ರತಿಭಟನೆ</strong><br />ಸಾರಿಗೆ ಮುಷ್ಕರದ ಅಂಗವಾಗಿ ನೌಕರರು ನಗರದಲ್ಲಿ ಗುರುವಾರ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.</p>.<p>ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಸಾರಿಗೆ ನೌಕರರ ಕೂಟ ನಿರ್ಧರಿಸಿತ್ತು. ಆದರೆ, ಅದಕ್ಕೆ ಪೊಲೀಸರು ಅನುಮತಿ ನೀಡದ ಕಾರಣ, ಗಾಂಧಿ ನಗರದಲ್ಲಿ ಮೇಣದ ಬತ್ತಿ ಹಿಡಿದು ಪ್ರತಿಭಟಿಸಿದರು.</p>.<p>ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದ್ ನೌಕರರ ಪ್ರತಿಭಟನೆಗೆ ಸಾಥ್ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>