ನಗರದಲ್ಲಿ ಸೋಮವಾರ ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಆಯೋಜಿಸಿದ್ದ ‘ಪಠ್ಯ ಮರು ಪರಿಷ್ಕರಣೆ–ಒಂದು ಚಿಂತನೆ’ ವಿಚಾರಗೋಷ್ಠಿ ಹಾಗೂ ‘ಪಠ್ಯ ಮರು ಪರಿಷ್ಕರಣೆ: ಹಿನ್ನೆಲೆ–ಮುನ್ನೆಲೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ‘ಕೇಶವ ಕೃಪಾದ ಆದೇಶದಂತೆ ಪಠ್ಯದ ಮರು ಪರಿಷ್ಕರಣೆ ನಡೆದಿದೆ. ಅಲ್ಲಿನ ನಾಯಕರೇ ಸೂತ್ರ ಧಾರರು. ದಿನಕ್ಕೊಂದು ವಿವಾದ ಹುಟ್ಟುಹಾಕಿ, ಜನರ ನೆಮ್ಮದಿಯನ್ನು ಬಿಜೆಪಿ ಸರ್ಕಾರ ಕೆಡಿಸುತ್ತಿದೆ’ ಎಂದರು.