ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದವರಲ್ಲಿ ಬಹುತೇಕರು ಕೆಳ ಜಾತಿಯವರೇ ಆಗಿದ್ದರು. ಬಂಡಾಯ ಸಾಹಿತಿಗಳೂ ಇದೇ ಸಮುದಾಯಗಳಿಂದ ಬಂದವರು. ಅಲ್ಲದೇ ವಚನ ಸಾಹಿತ್ಯದ ಹಾದಿಯನ್ನು ಮುಂದುವರಿಸಿದ ಏಕೈಕ ಸಾಹಿತ್ಯ ಎಂದರೆ ಬಂಡಾಯ ಸಾಹಿತ್ಯ’ ಎಂದು ಪ್ರತಿಪಾದಿಸಿದರು.