‘ಚರಂಡಿಯಲ್ಲಿ ಕಲ್ಲು ತೆಗೆದು ಸ್ವಚ್ಛಗೊಳಿಸಿದರೆ, ಗೋಡೆ ಕುಸಿದು ಬೀಳುವ ಸಂಭವವಿರುವುದಾಗಿ ಕಾರ್ಮಿಕರು ಗುತ್ತಿಗೆದಾರನಿಗೆ ಹೇಳಿದ್ದರು. ಅಷ್ಟಾದರೂ ಆತ, ಚರಂಡಿ ಸ್ವಚ್ಛ ಮಾಡಲು ಕಾರ್ಮಿಕರ ಮೇಲೆ ಒತ್ತಡ ಹೇರಿದ್ದ. ಹೀಗಾಗಿ, ಅಯ್ಯಪ್ಪ ಹಾಗೂ ಇತರರು ಚರಂಡಿ ಸ್ವಚ್ಛತೆಯಲ್ಲಿ ತೊಡಗಿದ್ದರು. ಇದೇ ಸಂದರ್ಭದಲ್ಲೇ ಗೋಡೆ ಕುಸಿದು ಕಾರ್ಮಿಕರ ಮೇಲೆ ಬಿದ್ದಿತ್ತು. ತೀವ್ರ ಗಾಯಗೊಂಡು ಅಯ್ಯಪ್ಪ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು.