ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ‘ಇಸ್ರೇಲ್ನಲ್ಲಿ ವರ್ಷಕ್ಕೆ ಕೇವಲ 59 ಮಿಲಿ ಮೀಟರ್ನಷ್ಟು ಮಳೆಯಾಗುತ್ತದೆ. ಆದರೂ, ಅಲ್ಲಿನವರಿಗೆ ನೀರಿನ ಕೊರತೆ ಬಾಧಿಸುವುದಿಲ್ಲ. ಇಷ್ಟೇ ನೀರಿನಲ್ಲಿ ತರಕಾರಿ ಬೆಳೆದು, ಬೇರೆ ದೇಶಗಳಿಗೂ ರಫ್ತು ಮಾಡುತ್ತಾರೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 80 ಮಿಲಿಮೀಟರ್ನಷ್ಟು ಮಳೆ ಸುರಿದರೂ, ಬರ ಪರಿಸ್ಥಿತಿ ಇದೆ ಎನ್ನುತ್ತಾರೆ. ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸುವ ಕೆಲಸ ಆಗಬೇಕಿದೆ’ ಎಂದರು.