<p><strong>ಬೆಂಗಳೂರು:</strong> ಬೆಂಗಳೂರು ನಗರವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿರುವ ಜಿಲ್ಲಾಡಳಿತವು ಅಂದಾಜು ₹7.69 ಕೋಟಿ ಮೌಲ್ಯದ 5 ಎಕರೆ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದುಕೊಂಡಿದೆ.</p>.<p>ವಿವಿಧ ತಾಲ್ಲೂಕು ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಗುಂಡುತೋಪು, ಸ್ಮಶಾನ, ಸರ್ಕಾರಿ ಓಣಿ, ಖರಾಬು, ಗೋಮಾಳ ಮತ್ತು ಕೆರೆ ಜಾಗಗಳನ್ನು ಶುಕ್ರವಾರ ತೆರವುಗೊಳಿಸಿದರು.</p>.<p>ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ದೇವಗೆರೆ ಗ್ರಾಮದ ಸ.ನಂ 71ರ 0.22 ಗುಂಟೆ ಗುಂಡುತೋಪು ಒತ್ತುವರಿ ತೆರವುಗೊಳಿಸಲಾಗಿದೆ. ಇದರ ಅಂದಾಜು ಮೌಲ್ಯ ₹50 ಲಕ್ಷ.</p>.<p>ತಾವರೆಕೆರೆ ಹೋಬಳಿ ದೊಡ್ಡೇರಿ ಗ್ರಾಮದ ಸ.ನಂ 62ರ ಸ್ಮಶಾನವಾಗಿದ್ದ ₹19 ಲಕ್ಷ ಮೌಲ್ಯದ 0.05 ಗುಂಟೆ ಒತ್ತುವರಿ ತೆರವುಗೊಳಿಸಲಾಗಿದೆ.</p>.<p>ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಶಿವನಪುರ ಗ್ರಾಮದ ಸ.ನಂ 2/4ಎ ರ 0.02.08 ಗುಂಟೆ ಸರ್ಕಾರಿ ಓಣಿ ತೆರವು ಮಾಡಲಾಗಿದೆ. ಇದರ ಅಂದಾಜು ಮೌಲ್ಯ ₹ 20 ಲಕ್ಷ.</p>.<p>ದಾಸನಪುರ ಹೋಬಳಿಯ ಶಿವನಪುರ ಗ್ರಾಮದ ಸ.ನಂ 2/4ಬಿ1ರ ₹10 ಲಕ್ಷ ಮೌಲ್ಯದ 0.012 ಗುಂಟೆ ಸರ್ಕಾರಿ ಓಣಿ ಒತ್ತುವರಿ ತೆರವುಗೊಳಿಸಲಾಗಿದೆ.</p>.<p>ಹೊಸಹಳ್ಳಿಪಾಳ್ಯ ಗ್ರಾಮದ ಸ.ನಂ 40 ರ ₹2 ಕೋಟಿ ಮೌಲ್ಯದ 2 ಎಕರೆ ಬಿಳಿಕೆರೆ ಜಾಜಿಮುಳಗಡೆ ಒತ್ತುವರಿ ತೆರವುಗೊಳಿಸಲಾಗಿದೆ.</p>.<p>ತೊರೆನಾಗಸಂದ್ರ ಗ್ರಾಮದ ಸ.ನಂ 34 ರ ₹1.50 ಕೋಟಿ ಮೌಲ್ಯದ 0.27 ಗುಂಟೆ ಖರಾಬು ಒತ್ತುವರಿ ತೆರವು ಮಾಡಲಾಗಿದೆ.</p>.<p>ಯಲಹಂಕ ತಾಲ್ಲೂಕಿನ ಹೆಸರಘಟ್ಟ-1 ಹೋಬಳಿಯ ಕೊಡಿಗೆ ತಿರುಮಳಾಪುರ ಗ್ರಾಮದ ಸ.ನಂ 14ರ 0.31 ಗುಂಟೆ ಗೋಮಾಳ ಒತ್ತುವರಿ ತೆರವು ಮಾಡಲಾಗಿದೆ. ಇದರ ಮೌಲ್ಯ ₹1.20 ಕೋಟಿ.</p>.<p>ಹೆಸರಘಟ್ಟ-2 ಹೋಬಳಿಯ ಕಾಕೋಳು ಗ್ರಾಮದ ಸ.ನಂ 44ರ ₹ 2 ಕೋಟಿ ಮೌಲ್ಯದ 1 ಎಕರೆ ಕೆರೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ನಗರವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿರುವ ಜಿಲ್ಲಾಡಳಿತವು ಅಂದಾಜು ₹7.69 ಕೋಟಿ ಮೌಲ್ಯದ 5 ಎಕರೆ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದುಕೊಂಡಿದೆ.</p>.<p>ವಿವಿಧ ತಾಲ್ಲೂಕು ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಗುಂಡುತೋಪು, ಸ್ಮಶಾನ, ಸರ್ಕಾರಿ ಓಣಿ, ಖರಾಬು, ಗೋಮಾಳ ಮತ್ತು ಕೆರೆ ಜಾಗಗಳನ್ನು ಶುಕ್ರವಾರ ತೆರವುಗೊಳಿಸಿದರು.</p>.<p>ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ದೇವಗೆರೆ ಗ್ರಾಮದ ಸ.ನಂ 71ರ 0.22 ಗುಂಟೆ ಗುಂಡುತೋಪು ಒತ್ತುವರಿ ತೆರವುಗೊಳಿಸಲಾಗಿದೆ. ಇದರ ಅಂದಾಜು ಮೌಲ್ಯ ₹50 ಲಕ್ಷ.</p>.<p>ತಾವರೆಕೆರೆ ಹೋಬಳಿ ದೊಡ್ಡೇರಿ ಗ್ರಾಮದ ಸ.ನಂ 62ರ ಸ್ಮಶಾನವಾಗಿದ್ದ ₹19 ಲಕ್ಷ ಮೌಲ್ಯದ 0.05 ಗುಂಟೆ ಒತ್ತುವರಿ ತೆರವುಗೊಳಿಸಲಾಗಿದೆ.</p>.<p>ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಶಿವನಪುರ ಗ್ರಾಮದ ಸ.ನಂ 2/4ಎ ರ 0.02.08 ಗುಂಟೆ ಸರ್ಕಾರಿ ಓಣಿ ತೆರವು ಮಾಡಲಾಗಿದೆ. ಇದರ ಅಂದಾಜು ಮೌಲ್ಯ ₹ 20 ಲಕ್ಷ.</p>.<p>ದಾಸನಪುರ ಹೋಬಳಿಯ ಶಿವನಪುರ ಗ್ರಾಮದ ಸ.ನಂ 2/4ಬಿ1ರ ₹10 ಲಕ್ಷ ಮೌಲ್ಯದ 0.012 ಗುಂಟೆ ಸರ್ಕಾರಿ ಓಣಿ ಒತ್ತುವರಿ ತೆರವುಗೊಳಿಸಲಾಗಿದೆ.</p>.<p>ಹೊಸಹಳ್ಳಿಪಾಳ್ಯ ಗ್ರಾಮದ ಸ.ನಂ 40 ರ ₹2 ಕೋಟಿ ಮೌಲ್ಯದ 2 ಎಕರೆ ಬಿಳಿಕೆರೆ ಜಾಜಿಮುಳಗಡೆ ಒತ್ತುವರಿ ತೆರವುಗೊಳಿಸಲಾಗಿದೆ.</p>.<p>ತೊರೆನಾಗಸಂದ್ರ ಗ್ರಾಮದ ಸ.ನಂ 34 ರ ₹1.50 ಕೋಟಿ ಮೌಲ್ಯದ 0.27 ಗುಂಟೆ ಖರಾಬು ಒತ್ತುವರಿ ತೆರವು ಮಾಡಲಾಗಿದೆ.</p>.<p>ಯಲಹಂಕ ತಾಲ್ಲೂಕಿನ ಹೆಸರಘಟ್ಟ-1 ಹೋಬಳಿಯ ಕೊಡಿಗೆ ತಿರುಮಳಾಪುರ ಗ್ರಾಮದ ಸ.ನಂ 14ರ 0.31 ಗುಂಟೆ ಗೋಮಾಳ ಒತ್ತುವರಿ ತೆರವು ಮಾಡಲಾಗಿದೆ. ಇದರ ಮೌಲ್ಯ ₹1.20 ಕೋಟಿ.</p>.<p>ಹೆಸರಘಟ್ಟ-2 ಹೋಬಳಿಯ ಕಾಕೋಳು ಗ್ರಾಮದ ಸ.ನಂ 44ರ ₹ 2 ಕೋಟಿ ಮೌಲ್ಯದ 1 ಎಕರೆ ಕೆರೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>