ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕೃತ ಜಾಹೀರಾತು ಫಲಕ ತೆರವಿಗೆ ವಿರೋಧಿಸಿ ಪ್ರತಿಭಟನೆ

Last Updated 25 ಅಕ್ಟೋಬರ್ 2018, 19:23 IST
ಅಕ್ಷರ ಗಾತ್ರ

ಬೆಂಗಳೂರು: ಅಧಿಕೃತವಾಗಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿ ‘ಹೊರಾಂಗಣ ಜಾಹೀರಾತು ಸಂಘ’ದ ಸದಸ್ಯರು ಪುರಭವನದ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.

‘ಅಧಿಕೃತವಾಗಿ 1,800 ಜಾಹೀರಾತು ಫಲಕಗಳಿವೆ. ಆದರೆ 4,500 ಅನಧಿಕೃತ ಫಲಕಗಳನ್ನು ಬಿಬಿಎಂಪಿ ತೆರವು ಮಾಡಿರುವುದಾಗಿ ಹೇಳಿದೆ. ಅನಧಿಕೃತವಾಗಿ ಅಳವಡಿಸುವವರೆಗೂ ಬಿಬಿಎಂಪಿ ಅಧಿಕಾರಿಗಳು ಏನು ಮಾಡುತ್ತಿದ್ದರು’ ಎಂದು ಸಂಘದ ಅಧ್ಯಕ್ಷ ಎಸ್‌.ಎಂ.ಜಾವೇದ್‌ ಪ್ರಶ್ನಿಸಿದರು.

‘ಈ ಉದ್ಯಮದಿಂದ ವರ್ಷಕ್ಕೆ ₹ 600 ಕೋಟಿ ವಹಿವಾಟು ನಡೆಯುತ್ತದೆ. ಇದರಿಂದ ₹ 100 ಕೋಟಿಗೂ ಹೆಚ್ಚು ಸರ್ಕಾರಕ್ಕೆ ತೆರಿಗೆ ಸಂಗ್ರಹವಾಗುತ್ತಿದೆ. ಆದರೂ ಉತ್ತರ ಭಾರತದ ಬಸ್‌ಶೇಲ್ಟರ್‌ ಮತ್ತು ಸ್ಕೈವಾಕ್‌ ಕಂಪನಿಗಳಿಗೆ ಆಹ್ವಾನ ನೀಡುತ್ತಿವೆ. ಇದೆಲ್ಲದಕ್ಕೂ ಬಿಬಿಎಂಪಿ ಅಧಿಕಾರಿಗಳ ಕುಮ್ಮಕ್ಕಿದೆ’ ಎಂದು ಆರೋಪಿಸಿದರು.

ಉಪಾಧ್ಯಕ್ಷ ಆರ್‌.ಕೆ.ಬಾಟಿಯಾ,‘ಈ ಉದ್ಯಮವನ್ನೇ ನೆಚ್ಚಿಕೊಂಡಿರುವ 6 ಲಕ್ಷ ಮಂದಿ ಬೀದಿಪಾಲಾಗುತ್ತಾರೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆದವರು ಇದ್ದಾರೆ. ಅಧಿಕೃತವಾದ ಜಾಹೀರಾತು ಫಲಕ ತೆರವುಗೊಳಿಸಿದರೆ, ಸಾಲ ಮರುಪಾವತಿಸುವುದು ಹೇಗೆ?. ಕೂಡಲೇ ಅನುಮತಿ ಕೊಡಲು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು' ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT