‘ಬಿಡದಿ, ಚನ್ನಪಟ್ಟಣ, ರಾಮನಗರ, ಮದ್ದೂರು ಸೇರಿ ಹಲವು ಊರುಗಳಿಗೆ ಬೈಪಾಸ್ ರಸ್ತೆ ಹಾದು ಹೋಗಲಿದ್ದು, ಇದರಿಂದ ‘ಗೊಂಬೆಗಳ ನಾಡು’ ಎಂದು ಹೆಸರಾಗಿರುವ ಚನ್ನಪಟ್ಟಣದ ಕರಕುಶಲ ವಸ್ತುಗಳಿಗೆ, ಬಿಡದಿ ತಟ್ಟೆ ಇಡ್ಲಿ, ಮದ್ದೂರು ವಡೆ ಮೊದಲಾದ ಸ್ಥಳೀಯ ಪ್ರಸಿದ್ಧ ತಿನಿಸುಗಳಿಗೆ ಗ್ರಾಹಕರ ಕೊರತೆ ಎದುರಾಗಲಿದೆ. ಇವುಗಳಿಂದ ಬದುಕು ಕಟ್ಟಿಕೊಂಡಿರುವ ಸಾವಿರಾರು ಜನರಿಗೆ ಇದರಿಂದ ತೊಂದರೆ ಆಗಲಿದೆ. ಅಲ್ಲದೇ, ಆಟಿಕೆಗಳ ವೈವಿಧ್ಯಗಳು ನಶಿಸುವ ಅಪಾಯವಿದೆ’ ಎಂದಿದ್ದಾರೆ.