ಬೆಂಗಳೂರಿನ ಇಂದಿರಾನಗರದ ಔಷಧಿ ಮಳಿಗೆಯೊಂದರಲ್ಲಿ ಮಾತ್ರ ಔಷಧಿ ಲಭ್ಯವಿತ್ತು. ಬೆಂಗಳೂರಿಗೆ ಬಂದು ಔಷಧಿ ತೆಗೆದುಕೊಂಡು ಹೋಗುವುದು ವ್ಯಕ್ತಿಗೆ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಅಳಲು ತೋಡಿಕೊಂಡು ವಿಡಿಯೊ ಚಿತ್ರೀಕರಿಸಿದ್ದ ವ್ಯಕ್ತಿ, ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಅದನ್ನು ನೋಡಿದ್ದ ಹೆಡ್ ಕಾನ್ಸ್ಟೆಬಲ್ ಕುಮಾರಸ್ವಾಮಿ, ರೋಗಿಯನ್ನು ಸಂಪರ್ಕಿಸಿ ಸಹಾಯ ಮಾಡುವುದಾಗಿ ಹೇಳಿದ್ದರು. ಅದರಂತೆ ಔಷಧಿ ಖರೀದಿಸಿಟ್ಟುಕೊಂಡು ಒಬ್ಬರೇ ಬೈಕ್ನಲ್ಲಿ ನಸುಕಿನ 4.30ರ ಸುಮಾರಿಗೆ ಬೆಂಗಳೂರಿನಿಂದ ಧಾರವಾಡದತ್ತ ಹೊರಟಿದ್ದರು.