<p><strong>ಬೆಂಗಳೂರು:</strong> ‘ಅಂಬಲಿಯಿಂದ ಶಿವನನ್ನೇ ಕೃತಾರ್ಥನನ್ನಾಗಿ ಮಾಡಿದ ಮಾದಾರ ಚೆನ್ನಯ್ಯನವರು ಬಸವಣ್ಣನವರಿಂದ ‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ’ ಎಂಬ ಸ್ತುತಿ ಪಡೆದ ಬಸವ ಧರ್ಮದ ಗೋತ್ರಪುರುಷ’ ಎಂದು ಉದ್ಯಮಿ ಸಿದ್ದೇಶ್ ನಾಗೇಂದ್ರ ಹೇಳಿದರು.</p>.<p>ವಚನಜ್ಯೋತಿ ಬಳಗವು ವಿಜಯನಗರದ ಭೈರವ ರಾಗ ಅಂಗಳದಲ್ಲಿ ಆಯೋಜಿಸಿದ್ದ ಮಾದಾರ ಚೆನ್ನಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಬಸವಣ್ಣ ಕಟ್ಟಿದ ಕಲ್ಯಾಣ ಸಮಾಜವು ಅದೇ ಹಾದಿಯಲ್ಲಿ ಮುಂದುವರೆದಿದ್ದರೆ ಈ ನಾಡಿನ ಚಿತ್ರಣವೇ ಬೇರೆಯಾಗುತ್ತಿತ್ತು. ದುರದೃಷ್ಟವಶಾತ್ ವಚನ ಸಾಹಿತ್ಯ ಮರೆಯಾಯಿತು. ವಿಚಾರಶೀಲ ಧರ್ಮ ಸಂಪ್ರದಾಯಿಗಳ ಕೈವಶವಾಗಿ ಇದೀಗ ಮರುಹುಟ್ಟು ಪಡೆಯುತ್ತಿದೆ ಎಂದರು.</p>.<p>ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ‘ಬಸವಣ್ಣನವರ ನಡೆಯಿಂದ ಆಕರ್ಷಿತರಾಗಿ ಕಲ್ಯಾಣಕ್ಕೆ ಬಂದ ಚೆನ್ನಯ್ಯನವರು, ಅಣ್ಣನವರ ಜೊತೆಯಾಗಿ ನಿಂತು ಅಪ್ಪನೆಂಬ ಅಭಿದಾನಕ್ಕೆ ಪಾತ್ರರಾಗಿದ್ದು ಅವರ ಘನ ವ್ಯಕ್ತಿತ್ವಕ್ಕೆ ಸಾಕ್ಷಿ’ ಎಂದರು.</p>.<p>ಉಪನ್ಯಾಸ ನೀಡಿದ ಕವಿ ಗುಂಡೀಗೆರೆ ವಿಶ್ವನಾಥ್ ಅವರು, ಚೆನ್ನಯ್ಯನವರ ಜೀವನ ಚರಿತ್ರೆಯನ್ನು ತಿಳಿಸಿ, ಅರಿನಿಜಾತ್ಮ ರಾಮ ರಾಮ ಅಂಕಿತದಲ್ಲಿ ಪ್ರಕಟಿತ ಹತ್ತು ವಚನಗಳ ಅರ್ಥ ವಿವರಿಸಿದರು.</p>.<p>ಪುಟಾಣಿಗಳಾದ ಶ್ರಾವಣಿ ಹಣ್ಣಿ, ಸಿದ್ದು ಧವನ್, ಪೂರ್ಣಿಕ ಆರಾಧ್ಯ, ಹವ್ಯಾಸಿ ಗಾಯಕಿ ಚಂದ್ರಮತಿ ಮಜ್ಗಿ, ಮುಕ್ತಾಯಕ್ಕ ಬಳಗ ಹಾಗೂ ವಚನ ಕಲಿಕೆ ತರಗತಿ ವಿದ್ಯಾರ್ಥಿಗಳು ವಚನ ಗಾಯನ ಮಾಡಿದರು. ಮಾದಾರ ಚೆನ್ನಯ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ನಂಜಪ್ಪ ಅವರನ್ನು ಅಭಿನಂದಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಅಂಬಲಿಯಿಂದ ಶಿವನನ್ನೇ ಕೃತಾರ್ಥನನ್ನಾಗಿ ಮಾಡಿದ ಮಾದಾರ ಚೆನ್ನಯ್ಯನವರು ಬಸವಣ್ಣನವರಿಂದ ‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ’ ಎಂಬ ಸ್ತುತಿ ಪಡೆದ ಬಸವ ಧರ್ಮದ ಗೋತ್ರಪುರುಷ’ ಎಂದು ಉದ್ಯಮಿ ಸಿದ್ದೇಶ್ ನಾಗೇಂದ್ರ ಹೇಳಿದರು.</p>.<p>ವಚನಜ್ಯೋತಿ ಬಳಗವು ವಿಜಯನಗರದ ಭೈರವ ರಾಗ ಅಂಗಳದಲ್ಲಿ ಆಯೋಜಿಸಿದ್ದ ಮಾದಾರ ಚೆನ್ನಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಬಸವಣ್ಣ ಕಟ್ಟಿದ ಕಲ್ಯಾಣ ಸಮಾಜವು ಅದೇ ಹಾದಿಯಲ್ಲಿ ಮುಂದುವರೆದಿದ್ದರೆ ಈ ನಾಡಿನ ಚಿತ್ರಣವೇ ಬೇರೆಯಾಗುತ್ತಿತ್ತು. ದುರದೃಷ್ಟವಶಾತ್ ವಚನ ಸಾಹಿತ್ಯ ಮರೆಯಾಯಿತು. ವಿಚಾರಶೀಲ ಧರ್ಮ ಸಂಪ್ರದಾಯಿಗಳ ಕೈವಶವಾಗಿ ಇದೀಗ ಮರುಹುಟ್ಟು ಪಡೆಯುತ್ತಿದೆ ಎಂದರು.</p>.<p>ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ‘ಬಸವಣ್ಣನವರ ನಡೆಯಿಂದ ಆಕರ್ಷಿತರಾಗಿ ಕಲ್ಯಾಣಕ್ಕೆ ಬಂದ ಚೆನ್ನಯ್ಯನವರು, ಅಣ್ಣನವರ ಜೊತೆಯಾಗಿ ನಿಂತು ಅಪ್ಪನೆಂಬ ಅಭಿದಾನಕ್ಕೆ ಪಾತ್ರರಾಗಿದ್ದು ಅವರ ಘನ ವ್ಯಕ್ತಿತ್ವಕ್ಕೆ ಸಾಕ್ಷಿ’ ಎಂದರು.</p>.<p>ಉಪನ್ಯಾಸ ನೀಡಿದ ಕವಿ ಗುಂಡೀಗೆರೆ ವಿಶ್ವನಾಥ್ ಅವರು, ಚೆನ್ನಯ್ಯನವರ ಜೀವನ ಚರಿತ್ರೆಯನ್ನು ತಿಳಿಸಿ, ಅರಿನಿಜಾತ್ಮ ರಾಮ ರಾಮ ಅಂಕಿತದಲ್ಲಿ ಪ್ರಕಟಿತ ಹತ್ತು ವಚನಗಳ ಅರ್ಥ ವಿವರಿಸಿದರು.</p>.<p>ಪುಟಾಣಿಗಳಾದ ಶ್ರಾವಣಿ ಹಣ್ಣಿ, ಸಿದ್ದು ಧವನ್, ಪೂರ್ಣಿಕ ಆರಾಧ್ಯ, ಹವ್ಯಾಸಿ ಗಾಯಕಿ ಚಂದ್ರಮತಿ ಮಜ್ಗಿ, ಮುಕ್ತಾಯಕ್ಕ ಬಳಗ ಹಾಗೂ ವಚನ ಕಲಿಕೆ ತರಗತಿ ವಿದ್ಯಾರ್ಥಿಗಳು ವಚನ ಗಾಯನ ಮಾಡಿದರು. ಮಾದಾರ ಚೆನ್ನಯ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ನಂಜಪ್ಪ ಅವರನ್ನು ಅಭಿನಂದಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>