<p><strong>ಕೆ.ಆರ್.ಪುರ:</strong> ಇವರ ಮನೆಯಲ್ಲಿ ಬಡತನವಿದೆ. ಆದರೆ, ಹೃದಯ ಶ್ರೀಮಂತಿಕೆಗೆ ಕೊರತೆ ಇಲ್ಲ. ಇದರ ಜೊತೆಗೆ, ದೇಶಕ್ಕೆ ಕಿಂಚಿತ್ತಾದರೂ ಕೊಡುಗೆ ನೀಡಬೇಕು ಎಂಬ ಸದುದ್ದೇಶದಿಂದ ಪಿಎಂ–ಕೇರ್ಸ್ಗೆ ₹60 ಸಾವಿರ ದೇಣಿಗೆ ನೀಡಿದ್ದಾರೆ ಆಂಥೋನಿ ಸ್ವಾಮಿ.</p>.<p>ಇವರು ಕಲ್ಪಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಶವ ಸುಡುವ ಕೆಲಸ ಮಾಡುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಹಣವನ್ನು ಕೊರೊನಾ ಪರಿಹಾರ ಕಾರ್ಯಗಳಿಗೆ ನೀಡಿದ್ದಾರೆ ಆಂಥೋನಿ ಸ್ವಾಮಿ ಅಲಿಯಾಸ್ ಎಲ್.ಎಸ್. ಕುಟ್ಟಿ.</p>.<p>32 ವರ್ಷಗಳಿಂದ ಕಲ್ಪಳ್ಳಿಯ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ತಿಂಗಳಿಗೆ ₹10 ಸಾವಿರ ಗೌರವಧನ ನೀಡುತ್ತದೆ. ಇದರಲ್ಲಿಯೇ ನಾಲ್ಕು ಮಕ್ಕಳು, ಪತ್ನಿ ಮತ್ತು ತಾಯಿಯನ್ನು ಅವರು ಸಾಕಬೇಕು. ಸರ್ಕಾರವೇ ನೀಡಿರುವ ಸ್ಮಶಾನದ ಮೂಲೆಯೊಂದರ ಪುಟ್ಟ ಮನೆಯಲ್ಲಿ ಅವರು ವಾಸವಿದ್ದಾರೆ. ಅವರ ತಂದೆಯೂ ಇಲ್ಲಿಯೇ ಕೆಲಸ ಮಾಡುತ್ತಿದ್ದರು.</p>.<p>ಅವರ ಒಬ್ಬ ಮಗಳು ಒಂಬತ್ತನೇ ತರಗತಿ, ಮಗ ಎಸ್ಎಸ್ಎಲ್ಸಿ ಓದುತ್ತಿದ್ದಾನೆ. ಮತ್ತಿಬ್ಬರು ಹೆಣ್ಣು ಮಕ್ಕಳು ಪಿಯುಸಿ ಓದುತ್ತಿದ್ದು, ಅವರ ಮುಂದಿನ ಶಿಕ್ಷಣಕ್ಕಾಗಿ ಅರವತ್ತು ಸಾವಿರ ಹಣವನ್ನು ಇವರು ಕೂಡಿಟ್ಟಿದ್ದರು.</p>.<p>ನೆರೆ ಹಾವಳಿ ಸಂದರ್ಭದಲ್ಲಿಯೂ ಸಂತ್ರಸ್ತರಿಗಾಗಿ ₹8 ರೂಪಾಯಿಯಲ್ಲಿ ಔಷಧಿ ಖರೀದಿಸಿ ಅಗತ್ಯವಿರುವವರಿಗೆ ನೀಡಿದ್ದರು. ಅನೇಕ ಸಲ ಇವರು ಕುಟುಂಬದವರ ನೆರವಿನೊಂದಿಗೆ ಅನಾಥ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.</p>.<p>‘ನನ್ನ ಮಕ್ಕಳಿಗೆ ಹೇಗಾದರೂ ಶಿಕ್ಷಣ ಕೊಡಿಸಬಹುದು. ದೇಶ ಕಷ್ಟದಲ್ಲಿರುವಾಗ ಸಹಾಯ ಮಾಡುವುದು ಮುಖ್ಯ. ಕುಟುಂಬದವರನ್ನು ಇಲ್ಲಿಯವರೆಗೆ ಯಾವುದೇ ದೇವಸ್ಥಾನಕ್ಕೂ ಕರೆದುಕೊಂಡು ಹೋಗಿಲ್ಲ. ಅವರಿಗೆ ಪ್ರಧಾನಿ ಅವರನ್ನು ಒಮ್ಮೆ ತೋರಿಸಬೇಕು ಎಂಬ ಆಸೆ ಇದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ:</strong> ಇವರ ಮನೆಯಲ್ಲಿ ಬಡತನವಿದೆ. ಆದರೆ, ಹೃದಯ ಶ್ರೀಮಂತಿಕೆಗೆ ಕೊರತೆ ಇಲ್ಲ. ಇದರ ಜೊತೆಗೆ, ದೇಶಕ್ಕೆ ಕಿಂಚಿತ್ತಾದರೂ ಕೊಡುಗೆ ನೀಡಬೇಕು ಎಂಬ ಸದುದ್ದೇಶದಿಂದ ಪಿಎಂ–ಕೇರ್ಸ್ಗೆ ₹60 ಸಾವಿರ ದೇಣಿಗೆ ನೀಡಿದ್ದಾರೆ ಆಂಥೋನಿ ಸ್ವಾಮಿ.</p>.<p>ಇವರು ಕಲ್ಪಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಶವ ಸುಡುವ ಕೆಲಸ ಮಾಡುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಹಣವನ್ನು ಕೊರೊನಾ ಪರಿಹಾರ ಕಾರ್ಯಗಳಿಗೆ ನೀಡಿದ್ದಾರೆ ಆಂಥೋನಿ ಸ್ವಾಮಿ ಅಲಿಯಾಸ್ ಎಲ್.ಎಸ್. ಕುಟ್ಟಿ.</p>.<p>32 ವರ್ಷಗಳಿಂದ ಕಲ್ಪಳ್ಳಿಯ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ತಿಂಗಳಿಗೆ ₹10 ಸಾವಿರ ಗೌರವಧನ ನೀಡುತ್ತದೆ. ಇದರಲ್ಲಿಯೇ ನಾಲ್ಕು ಮಕ್ಕಳು, ಪತ್ನಿ ಮತ್ತು ತಾಯಿಯನ್ನು ಅವರು ಸಾಕಬೇಕು. ಸರ್ಕಾರವೇ ನೀಡಿರುವ ಸ್ಮಶಾನದ ಮೂಲೆಯೊಂದರ ಪುಟ್ಟ ಮನೆಯಲ್ಲಿ ಅವರು ವಾಸವಿದ್ದಾರೆ. ಅವರ ತಂದೆಯೂ ಇಲ್ಲಿಯೇ ಕೆಲಸ ಮಾಡುತ್ತಿದ್ದರು.</p>.<p>ಅವರ ಒಬ್ಬ ಮಗಳು ಒಂಬತ್ತನೇ ತರಗತಿ, ಮಗ ಎಸ್ಎಸ್ಎಲ್ಸಿ ಓದುತ್ತಿದ್ದಾನೆ. ಮತ್ತಿಬ್ಬರು ಹೆಣ್ಣು ಮಕ್ಕಳು ಪಿಯುಸಿ ಓದುತ್ತಿದ್ದು, ಅವರ ಮುಂದಿನ ಶಿಕ್ಷಣಕ್ಕಾಗಿ ಅರವತ್ತು ಸಾವಿರ ಹಣವನ್ನು ಇವರು ಕೂಡಿಟ್ಟಿದ್ದರು.</p>.<p>ನೆರೆ ಹಾವಳಿ ಸಂದರ್ಭದಲ್ಲಿಯೂ ಸಂತ್ರಸ್ತರಿಗಾಗಿ ₹8 ರೂಪಾಯಿಯಲ್ಲಿ ಔಷಧಿ ಖರೀದಿಸಿ ಅಗತ್ಯವಿರುವವರಿಗೆ ನೀಡಿದ್ದರು. ಅನೇಕ ಸಲ ಇವರು ಕುಟುಂಬದವರ ನೆರವಿನೊಂದಿಗೆ ಅನಾಥ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.</p>.<p>‘ನನ್ನ ಮಕ್ಕಳಿಗೆ ಹೇಗಾದರೂ ಶಿಕ್ಷಣ ಕೊಡಿಸಬಹುದು. ದೇಶ ಕಷ್ಟದಲ್ಲಿರುವಾಗ ಸಹಾಯ ಮಾಡುವುದು ಮುಖ್ಯ. ಕುಟುಂಬದವರನ್ನು ಇಲ್ಲಿಯವರೆಗೆ ಯಾವುದೇ ದೇವಸ್ಥಾನಕ್ಕೂ ಕರೆದುಕೊಂಡು ಹೋಗಿಲ್ಲ. ಅವರಿಗೆ ಪ್ರಧಾನಿ ಅವರನ್ನು ಒಮ್ಮೆ ತೋರಿಸಬೇಕು ಎಂಬ ಆಸೆ ಇದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>