<p><strong>ಬೆಂಗಳೂರು:</strong>ಪಶ್ಚಿಮಘಟ್ಟಗಳನ್ನು ಉಳಿಸದಿದ್ದರೆ, ಮುಂದೊಂದು ದಿನ ನಾವೆಲ್ಲರೂ ಗುಳೆ ಹೊರಡುವ ಸ್ಥಿತಿ ಬರಲಿದೆ. ಲಿಂಗನಮಕ್ಕಿ, ತುಂಗಭದ್ರಾ ಅಣೆಕಟ್ಟುಗಳೂ ಅಪಾಯಕ್ಕೆ ಸಿಲುಕಲಿವೆ...</p>.<p>ಈ ಆತಂಕ ಸಾಗರದ ವಿದ್ಯಾರ್ಥಿನಿ ಮನಿಷಾ ಅವರ ಮಾತುಗಳಲ್ಲಿ ವ್ಯಕ್ತವಾಯಿತು.</p>.<p>ಯುನೈಟೆಡ್ ಕನ್ಸರ್ವೇಷನ್ ಅಸೋಸಿಯೇಷನ್ನ ಅಡಿ ವಿವಿಧ ಪರಿಸರವಾದಿ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪಶ್ಚಿಮ ಘಟ್ಟಗಳನ್ನು ಉಳಿಸುವ ಕುರಿತು ಒಕ್ಕೊರಲ ಧ್ವನಿ ಕೇಳಿ ಬಂದಿತು.</p>.<p>ಸದ್ಯ ಉತ್ತರ ಕರ್ನಾಟಕದವರು ಗುಳೆ ಹೋಗುತ್ತಿದ್ದಾರೆ. ಮುಂದೊಂದು ದಿನ ಮಲೆನಾಡಿನವರೂ ಗುಳೆ ಹೋಗಬೇಕಾಗುವ ಸ್ಥಿತಿ ಬರಲಿದೆ ಎಂಬ ಕಳವಳ ಅವರ ಮಾತಿನಲ್ಲಿ ವ್ಯಕ್ತವಾಯಿತು.</p>.<p>‘90 ದಶಲಕ್ಷ ವರ್ಷಗಳ ಇತಿಹಾಸವಿರುವ ಪಶ್ಚಿಮಘಟ್ಟ, ನೂರಾರು ನದಿಗಳ ಮೂಲವೂ ಹೌದು. ಅದರ ಅಸ್ತಿತ್ವದಿಂದಲೇ ನಾವೆಲ್ಲ ಉಸಿರಾಡುತ್ತಿದ್ದೇವೆ. ಸದ್ಯ 175 ತಾಲ್ಲೂಕುಗಳ ಪೈಕಿ 156 ತಾಲ್ಲೂಕುಗಳು ಬರಪೀಡಿತವಾಗಿವೆ. ಹೀಗಿರುವಾಗ ಅದನ್ನು ರಕ್ಷಿಸದಿದ್ದರೆ ಯಾರಿಗೂ ಉಳಿವಿಲ್ಲ’ ಎಂದು ನಟ ಸುರೇಶ್ ಹೆಬ್ಳಿಕರ್ ಹೇಳಿದರು.</p>.<p><strong>ಅಭಿವೃದ್ಧಿ ಹೆಸರಲ್ಲಿ ಅರಣ್ಯ ನಾಶ:</strong> ವಿದ್ಯುತ್ ನೀತಿವಿಶ್ಲೇಷಕಶಂಕರ್ ಶರ್ಮಾ, ‘ರಾಜ್ಯ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರಿಂದಪಶ್ಚಿಮ ಘಟ್ಟದಲ್ಲಿ 31 ಲಕ್ಷ ಮರಗಳ ಹನನವಾಗಲಿದೆ. ಕೇರಳ ಹಾಗೂ ಗೋವಾ ಮಧ್ಯೆ ವಿದ್ಯುತ್ ಪೂರೈಕೆಗಾಗಿ ಯೋಜನೆಯೊಂದನ್ನು ರೂಪಿಸಿ, ಜಾರಿಗೆ ತರಲು ಅನುಮತಿ ಸಹ ದೊರೆತಿದೆ. ಈ ಮೂಲಕ ಸಮೃದ್ಧ ಅರಣ್ಯವನ್ನು ನಾಶ ಮಾಡಲು ಸರ್ಕಾರ ಮುಂದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ದಟ್ಟ ಅರಣ್ಯವನ್ನು ನಾಶಪಡಿಸಿ ರೂಪಿಸುತ್ತಿರುವ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ಹಲವು ಅಧಿಕಾರಿಗಳೇ ವಿರೋಧ ವ್ಯಕ್ತಪಡಿಸಿದರೂ ಸರ್ಕಾರ ಮಾತ್ರ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗುತ್ತಿರುವುದು ಬೇಸರದ ಸಂಗತಿ. ಪ್ರಕೃತಿ ವಿರುದ್ಧದ ಯೋಜನೆಗಳನ್ನು ಕೈಬಿಟ್ಟು, ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಸಮೃದ್ಧಗೊಳಿಸಲು ಅಗತ್ಯ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.</p>.<p>ಕೊಡಗು, ಕಾವೇರಿಯನ್ನೂ ರಕ್ಷಿಸಬೇಕು ಎಂದು ಕರ್ನಲ್ ಮುತ್ತಣ್ಣ ಒತ್ತಾಯಿಸಿದರು.</p>.<p>‘ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಹರಿಸುವ ಬದಲು, ನಗರದಿಂದ ಲಿಂಗನಮಕ್ಕಿಗೆ ನೀರು ಹರಿಸುವಂತಹ ಯೋಜನೆಯತ್ತ ಮುಂದಾಗುವ ಮೂಲಕ ವಿಭಿನ್ನ ಆಲೋಚನೆ ಮಾಡಬೇಕಿದೆ’ ಎಂದು ನಿವೃತ್ತ ಎಪಿಸಿಸಿಎಫ್ ಎ.ಎಂ.ಅಣ್ಣಯ್ಯ ಹೇಳಿದರು.</p>.<p>ವಿವಿಧ ಶಾಲೆಗಳ 500 ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಪಶ್ಚಿಮಘಟ್ಟಗಳನ್ನು ಉಳಿಸದಿದ್ದರೆ, ಮುಂದೊಂದು ದಿನ ನಾವೆಲ್ಲರೂ ಗುಳೆ ಹೊರಡುವ ಸ್ಥಿತಿ ಬರಲಿದೆ. ಲಿಂಗನಮಕ್ಕಿ, ತುಂಗಭದ್ರಾ ಅಣೆಕಟ್ಟುಗಳೂ ಅಪಾಯಕ್ಕೆ ಸಿಲುಕಲಿವೆ...</p>.<p>ಈ ಆತಂಕ ಸಾಗರದ ವಿದ್ಯಾರ್ಥಿನಿ ಮನಿಷಾ ಅವರ ಮಾತುಗಳಲ್ಲಿ ವ್ಯಕ್ತವಾಯಿತು.</p>.<p>ಯುನೈಟೆಡ್ ಕನ್ಸರ್ವೇಷನ್ ಅಸೋಸಿಯೇಷನ್ನ ಅಡಿ ವಿವಿಧ ಪರಿಸರವಾದಿ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪಶ್ಚಿಮ ಘಟ್ಟಗಳನ್ನು ಉಳಿಸುವ ಕುರಿತು ಒಕ್ಕೊರಲ ಧ್ವನಿ ಕೇಳಿ ಬಂದಿತು.</p>.<p>ಸದ್ಯ ಉತ್ತರ ಕರ್ನಾಟಕದವರು ಗುಳೆ ಹೋಗುತ್ತಿದ್ದಾರೆ. ಮುಂದೊಂದು ದಿನ ಮಲೆನಾಡಿನವರೂ ಗುಳೆ ಹೋಗಬೇಕಾಗುವ ಸ್ಥಿತಿ ಬರಲಿದೆ ಎಂಬ ಕಳವಳ ಅವರ ಮಾತಿನಲ್ಲಿ ವ್ಯಕ್ತವಾಯಿತು.</p>.<p>‘90 ದಶಲಕ್ಷ ವರ್ಷಗಳ ಇತಿಹಾಸವಿರುವ ಪಶ್ಚಿಮಘಟ್ಟ, ನೂರಾರು ನದಿಗಳ ಮೂಲವೂ ಹೌದು. ಅದರ ಅಸ್ತಿತ್ವದಿಂದಲೇ ನಾವೆಲ್ಲ ಉಸಿರಾಡುತ್ತಿದ್ದೇವೆ. ಸದ್ಯ 175 ತಾಲ್ಲೂಕುಗಳ ಪೈಕಿ 156 ತಾಲ್ಲೂಕುಗಳು ಬರಪೀಡಿತವಾಗಿವೆ. ಹೀಗಿರುವಾಗ ಅದನ್ನು ರಕ್ಷಿಸದಿದ್ದರೆ ಯಾರಿಗೂ ಉಳಿವಿಲ್ಲ’ ಎಂದು ನಟ ಸುರೇಶ್ ಹೆಬ್ಳಿಕರ್ ಹೇಳಿದರು.</p>.<p><strong>ಅಭಿವೃದ್ಧಿ ಹೆಸರಲ್ಲಿ ಅರಣ್ಯ ನಾಶ:</strong> ವಿದ್ಯುತ್ ನೀತಿವಿಶ್ಲೇಷಕಶಂಕರ್ ಶರ್ಮಾ, ‘ರಾಜ್ಯ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರಿಂದಪಶ್ಚಿಮ ಘಟ್ಟದಲ್ಲಿ 31 ಲಕ್ಷ ಮರಗಳ ಹನನವಾಗಲಿದೆ. ಕೇರಳ ಹಾಗೂ ಗೋವಾ ಮಧ್ಯೆ ವಿದ್ಯುತ್ ಪೂರೈಕೆಗಾಗಿ ಯೋಜನೆಯೊಂದನ್ನು ರೂಪಿಸಿ, ಜಾರಿಗೆ ತರಲು ಅನುಮತಿ ಸಹ ದೊರೆತಿದೆ. ಈ ಮೂಲಕ ಸಮೃದ್ಧ ಅರಣ್ಯವನ್ನು ನಾಶ ಮಾಡಲು ಸರ್ಕಾರ ಮುಂದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ದಟ್ಟ ಅರಣ್ಯವನ್ನು ನಾಶಪಡಿಸಿ ರೂಪಿಸುತ್ತಿರುವ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ಹಲವು ಅಧಿಕಾರಿಗಳೇ ವಿರೋಧ ವ್ಯಕ್ತಪಡಿಸಿದರೂ ಸರ್ಕಾರ ಮಾತ್ರ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗುತ್ತಿರುವುದು ಬೇಸರದ ಸಂಗತಿ. ಪ್ರಕೃತಿ ವಿರುದ್ಧದ ಯೋಜನೆಗಳನ್ನು ಕೈಬಿಟ್ಟು, ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಸಮೃದ್ಧಗೊಳಿಸಲು ಅಗತ್ಯ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.</p>.<p>ಕೊಡಗು, ಕಾವೇರಿಯನ್ನೂ ರಕ್ಷಿಸಬೇಕು ಎಂದು ಕರ್ನಲ್ ಮುತ್ತಣ್ಣ ಒತ್ತಾಯಿಸಿದರು.</p>.<p>‘ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಹರಿಸುವ ಬದಲು, ನಗರದಿಂದ ಲಿಂಗನಮಕ್ಕಿಗೆ ನೀರು ಹರಿಸುವಂತಹ ಯೋಜನೆಯತ್ತ ಮುಂದಾಗುವ ಮೂಲಕ ವಿಭಿನ್ನ ಆಲೋಚನೆ ಮಾಡಬೇಕಿದೆ’ ಎಂದು ನಿವೃತ್ತ ಎಪಿಸಿಸಿಎಫ್ ಎ.ಎಂ.ಅಣ್ಣಯ್ಯ ಹೇಳಿದರು.</p>.<p>ವಿವಿಧ ಶಾಲೆಗಳ 500 ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>