<p><strong>ಬೆಂಗಳೂರು</strong>: ಮೆಲ್ಬರ್ನ್ ಮತ್ತು ಬೆಂಗಳೂರು ನಗರಗಳ ನಡುವಿನ ನವೀನ, ಸ್ಥಿರತೆ ಮತ್ತು ಸಮಗ್ರ ನಗರಾಭಿವೃದ್ಧಿಯನ್ನು ಉತ್ತೇಜಿಸಲು ಉಭಯ ನಗರಗಳು ಆಸಕ್ತಿ ವ್ಯಕ್ತಪಡಿಸಿವೆ.</p>.<p>ಆಸ್ಟ್ರೇಲಿಯಾದ ಮೆಲ್ಬರ್ನ್ನ ಲಾರ್ಡ್ ಮೇಯರ್ ನಿಕೊಲಸ್ ರೀಸ್ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ‘ಉದ್ದೇಶ ಪತ್ರ’ಗಳನ್ನು ವಿನಿಯಮ ಮಾಡಿಕೊಂಡರು.</p>.<p>‘ಸಿಸ್ಟರ್ ಸಿಟಿ’ಗಳ ನಡುವಿನ ಪರಸ್ಪರ ಸಹಕಾರವನ್ನು ಗಟ್ಟಿಗೊಳಿಸುವ ಉದ್ದೇಶದಿಂದ, ಎರಡೂ ನಗರಗಳು, ನಗರ ನವೀನತೆ –ಸ್ಮಾರ್ಟ್ ಸಿಟಿ, ತಂತ್ರಜ್ಞಾನ–ನಾವೀನ್ಯ ಪರಿಸರ ವ್ಯವಸ್ಥೆ, ಸುಸ್ಥಿರತೆ– ಹವಾಮಾನ ಸ್ಥಿತಿಸ್ಥಾಪಕ, ಶಿಕ್ಷಣ–ಜ್ಞಾನ ವಿನಿಮಯ, ಸಾಂಸ್ಕೃತಿಕ–ಕ್ರೀಡಾ ವಿನಿಮಯ ಸಾಧಿಸಲಾಗುತ್ತದೆ.</p>.<p>ತುಷಾರ್ ಗಿರಿನಾಥ್ ಮಾತನಾಡಿ, ‘ಮೆಲ್ಬರ್ನ್ ಹಾಗೂ ಬೆಂಗಳೂರು ನಡುವಿನ ವ್ಯವಸ್ಥಿತ ಮಾಹಿತಿ ವಿನಿಮಯ ಮತ್ತು ಅನುಭವ ಹಂಚಿಕೆಯಿಂದ ಎರಡೂ ನಗರಗಳ ಅಭಿವೃದ್ಧಿಗೆ ದಾರಿಯಾಗಲಿದೆ’ ಎಂದು ತಿಳಿಸಿದರು.</p>.<p>‘ನಗರಗಳ ನಡುವಿನ ಈ ಉದ್ದೇಶ ಘೋಷಣೆ, ಪರಸ್ಪರ ಕಲಿಕೆ ಮತ್ತು ಸಹಕಾರಕ್ಕೆ ಬಲ ತುಂಬುತ್ತದೆ. ಇದರಿಂದ ನಗರಾಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ’ ಎಂದು ಮಹೇಶ್ವರ್ ಹೇಳಿದರು.</p>.<p>ನಿಕೊಲಸ್ ರೀಸ್ ಮಾತನಾಡಿ, ‘ಸಹಕಾರ ಮತ್ತು ಪರಿಣಿತಿಯ ಹಂಚಿಕೆ ಮೂಲಕ, ಎರಡೂ ನಗರಗಳ ಹೊಸತನ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಎಐ ಆಧಾರಿತ ನಗರ ಪರಿಹಾರಗಳನ್ನು ರೂಪಿಸಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಅಭಿಪ್ರಾಯಪಟ್ಟರು.</p>.<p>ಜಿಬಿಎ ಹಾಗೂ ನಗರ ಪಾಲಿಕೆಗಳ ಕಾರ್ಯವೈಖರಿ, ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಮತ್ತು ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಲಾಯಿತು.</p>.<p>ಮೆಲ್ಬರ್ನ್ನ ಉಪ ಲಾರ್ಡ್ ಮೇಯರ್ ರೋಶೇನಾ ಕ್ಯಾಂಪ್ಬೆಲ್, ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮೆಲ್ಬರ್ನ್ ಮತ್ತು ಬೆಂಗಳೂರು ನಗರಗಳ ನಡುವಿನ ನವೀನ, ಸ್ಥಿರತೆ ಮತ್ತು ಸಮಗ್ರ ನಗರಾಭಿವೃದ್ಧಿಯನ್ನು ಉತ್ತೇಜಿಸಲು ಉಭಯ ನಗರಗಳು ಆಸಕ್ತಿ ವ್ಯಕ್ತಪಡಿಸಿವೆ.</p>.<p>ಆಸ್ಟ್ರೇಲಿಯಾದ ಮೆಲ್ಬರ್ನ್ನ ಲಾರ್ಡ್ ಮೇಯರ್ ನಿಕೊಲಸ್ ರೀಸ್ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ‘ಉದ್ದೇಶ ಪತ್ರ’ಗಳನ್ನು ವಿನಿಯಮ ಮಾಡಿಕೊಂಡರು.</p>.<p>‘ಸಿಸ್ಟರ್ ಸಿಟಿ’ಗಳ ನಡುವಿನ ಪರಸ್ಪರ ಸಹಕಾರವನ್ನು ಗಟ್ಟಿಗೊಳಿಸುವ ಉದ್ದೇಶದಿಂದ, ಎರಡೂ ನಗರಗಳು, ನಗರ ನವೀನತೆ –ಸ್ಮಾರ್ಟ್ ಸಿಟಿ, ತಂತ್ರಜ್ಞಾನ–ನಾವೀನ್ಯ ಪರಿಸರ ವ್ಯವಸ್ಥೆ, ಸುಸ್ಥಿರತೆ– ಹವಾಮಾನ ಸ್ಥಿತಿಸ್ಥಾಪಕ, ಶಿಕ್ಷಣ–ಜ್ಞಾನ ವಿನಿಮಯ, ಸಾಂಸ್ಕೃತಿಕ–ಕ್ರೀಡಾ ವಿನಿಮಯ ಸಾಧಿಸಲಾಗುತ್ತದೆ.</p>.<p>ತುಷಾರ್ ಗಿರಿನಾಥ್ ಮಾತನಾಡಿ, ‘ಮೆಲ್ಬರ್ನ್ ಹಾಗೂ ಬೆಂಗಳೂರು ನಡುವಿನ ವ್ಯವಸ್ಥಿತ ಮಾಹಿತಿ ವಿನಿಮಯ ಮತ್ತು ಅನುಭವ ಹಂಚಿಕೆಯಿಂದ ಎರಡೂ ನಗರಗಳ ಅಭಿವೃದ್ಧಿಗೆ ದಾರಿಯಾಗಲಿದೆ’ ಎಂದು ತಿಳಿಸಿದರು.</p>.<p>‘ನಗರಗಳ ನಡುವಿನ ಈ ಉದ್ದೇಶ ಘೋಷಣೆ, ಪರಸ್ಪರ ಕಲಿಕೆ ಮತ್ತು ಸಹಕಾರಕ್ಕೆ ಬಲ ತುಂಬುತ್ತದೆ. ಇದರಿಂದ ನಗರಾಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ’ ಎಂದು ಮಹೇಶ್ವರ್ ಹೇಳಿದರು.</p>.<p>ನಿಕೊಲಸ್ ರೀಸ್ ಮಾತನಾಡಿ, ‘ಸಹಕಾರ ಮತ್ತು ಪರಿಣಿತಿಯ ಹಂಚಿಕೆ ಮೂಲಕ, ಎರಡೂ ನಗರಗಳ ಹೊಸತನ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಎಐ ಆಧಾರಿತ ನಗರ ಪರಿಹಾರಗಳನ್ನು ರೂಪಿಸಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಅಭಿಪ್ರಾಯಪಟ್ಟರು.</p>.<p>ಜಿಬಿಎ ಹಾಗೂ ನಗರ ಪಾಲಿಕೆಗಳ ಕಾರ್ಯವೈಖರಿ, ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಮತ್ತು ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಲಾಯಿತು.</p>.<p>ಮೆಲ್ಬರ್ನ್ನ ಉಪ ಲಾರ್ಡ್ ಮೇಯರ್ ರೋಶೇನಾ ಕ್ಯಾಂಪ್ಬೆಲ್, ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>