‘ಕಲ್ಲಿನಿಂದ ಗಾಜಿಗೆ ಹೊಡೆದ ವಿಷಯವನ್ನು ಸಾರ್ವಜನಿಕರೊಬ್ಬರು ರೈಲು ಚಾಲಕನಿಗೆ ತಿಳಿಸಿದ್ದರು. ಸಾರ್ವಜನಿಕರ ಸ್ವತ್ತಾದ ಮೆಟ್ರೊ ರೈಲಿಗೆ ಕಲ್ಲು ಎಸೆದು ಗಾಜು ಒಡೆದಿರುವ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡುವ ಉದ್ದೇಶದಿಂದ ಕೃತ್ಯ ಎಸಗಿರುವ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.