‘ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಬೆಂಗಳೂರು ವಿಶ್ವವಿದ್ಯಾಲಯ, ಆರ್.ವಿ.ಕಾಲೇಜು, ಮೈಲಸಂದ್ರ ಹಾಗೂ ಕೆಂಗೇರಿಯಲ್ಲಿ ಮೆಟ್ರೊ ನಿಲ್ದಾಣ ತಲೆ ಎತ್ತಿವೆ. ಆದರೆ, ಈ ನಿಲ್ದಾಣಗಳ ಕೆಳಗೆ ತುಂಬಾ ಕತ್ತಲು ಇದೆ. ಹಗಲು ಹೊತ್ತಿನಲ್ಲಿಯೇ ವಾಹನದ ಲೈಟ್ ಹಾಕಿಕೊಂಡೇ ಸಂಚರಿಸಬೇಕು. ಕಾಮಗಾರಿ ನಡೆಯುತ್ತಿರುವುದರಿಂದ ಯಾವಾಗ ಯಾವ ಅನಾಹುತವಾಗುತ್ತದೆಯೋ ಎಂಬ ಆತಂಕ ಕಾಡುತ್ತದೆ’ ಎಂದು ವಾಹನ ಸವಾರ ಮಂಜುನಾಥ್ ಹೇಳುತ್ತಾರೆ.