‘ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ಪೆಟ್ರೋಲ್ ಬಾಂಬ್ ಹಾಕಿ ಮನೆಯನ್ನು ಸುಟ್ಟು ಹಾಕಿದ್ದಾರೆ. ಶ್ರೀನಿವಾಸಮೂರ್ತಿ ಅವರನ್ನು ಮುಗಿಸಲು ಸಂಚು ಮಾಡಿದಂತೆ ಕಾಣುತ್ತದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ನಂತರ ಶಿವಾಜಿನಗರ ಮತ್ತು ಇತರ ಕಡೆಗಳಲ್ಲಿ ಗಲಭೆ ಸೃಷ್ಟಿಸುವ ಉದ್ದೇಶ ಗಲಭೆಕೋರರಿಗೆ ಇತ್ತು. ಪೊಲೀಸರ ಸಮಯ ಪ್ರಜ್ಞೆಯಿಂದ ಗಲಭೆ ಬೇರೆ ಕಡೆಗಳಿಗೆ ಹಬ್ಬಿಸುವುದನ್ನು ತಪ್ಪಿಸಿದರು’ ಎಂದು ಅಶೋಕ ಹೇಳಿದರು.