‘7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅವಧಿಯಲ್ಲಿ ಹಿರಿಯ ಸಾಹಿತಿಗಳು ಬರೆದ ಕವಿತೆಗಳನ್ನು ಓದಲು ನಾವು ಕಷ್ಟಪಡುತ್ತಿದ್ದೆವು. ಆದರೆ, 7ನೇ ತರಗತಿಯ ವಿದ್ಯಾರ್ಥಿನಿ ಅಮನಾ ಸಕಾರಾತ್ಮಕ ಭಾವನೆ ಮೂಡಿಸುವ ಕವಿತೆಗಳನ್ನು ರಚಿಸಿದ್ದಾಳೆ. ಸಮಾಜದ ಕುರಿತ ಕಳಕಳಿ, ಕಾಳಜಿ, ಅಂತಃಕರಣ, ಉದಾರತೆ ಎಲ್ಲವುಗಳನ್ನೂ ಅವಳ ಕವಿತೆಗಳಲ್ಲಿ ಕಾಣಬಹುದು’ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.