‘ಉನ್ನತ ಹುದ್ದೆ ಪಡೆಯಲಿ’
ಸಂಜೆ ನಡೆದ ನೂತನ ಸಚಿವರು ಹಾಗೂ ಶಾಸಕರ ಸನ್ಮಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಮಾತನಾಡಿ ‘ಸಮಾಜವು ಜಾಗೃತವಾಗಬೇಕು. ಮತ್ತಷ್ಟು ಸಂಘಟನೆಯಾಗಬೇಕು’ ಎಂದು ಕರೆ ನೀಡಿದರು.
‘ಸಮಾಜಕ್ಕೆ ಈಗ ನಾಯಕತ್ವವೂ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಬರೀ ವ್ಯಾಪಾರಕ್ಕೆ ಸೀಮಿತಗೊಳ್ಳದೇ ಐಎಎಸ್ ಐಪಿಎಸ್ ಅಧಿಕಾರಿಗಳು ಆಗಬೇಕು’ ಎಂದು ಕರೆ ನೀಡಿದರು.
‘ನ್ಯಾಯಾಂಗ ಕ್ಷೇತ್ರದಲ್ಲೂ ಸಮಾಜದ ಸಾಕಷ್ಟು ಮಂದಿ ಸಾಧನೆ ತೋರಿದ್ದಾರೆ. ಅವರ ಮಾರ್ಗದಲ್ಲಿ ಸಮಾಜದ ಯುವಕರು ಮುನ್ನಡೆಯಬೇಕು’ ಎಂದು ಶೆಟ್ಟರ್ ಹೇಳಿದರು.