‘ಕೆಲವು ತಿಂಗಳ ಹಿಂದೆ ಗೋಪಾಲನ ಸ್ನೇಹಿತ ಕರೀಗೌಡ ಎಂಬಾತನಿಂದ ಗಿರೀಶ್ ಒಂದೂವರೆ ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ. ಆದರೆ, ನಿಗದಿತ ಸಮಯಕ್ಕೆ ಸಾಲ ವಾಪಸ್ ನೀಡಿರಲಿಲ್ಲ. ಈ ವಿಚಾರವನ್ನು ಗೋಪಾಲನ ಬಳಿ ಕರೀಗೌಡ ಹೇಳಿಕೊಂಡಿದ್ದ. ಗೋಪಾಲ, ಗಿರೀಶ್ಗೆ ಕರೆ ಮಾಡಿ ಕರೀಗೌಡನ ಹಣ ವಾಪಸ್ ಕೊಡುವಂತೆ ಕೇಳಿಕೊಂಡಿದ್ದ. ಆಗ ಗಿರೀಶ್ ಹಣ ಕೊಡುವುದಾಗಿ ಹೇಳಿದ್ದ. ನಂತರ ಹಣ ವಾಪಸ್ ನೀಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದ’ ಎಂದು ಪೊಲೀಸರು ಹೇಳಿದರು.