‘ದೂರುದಾರರ ಮೊಬೈಲ್ಗೆ ಕರೆ ಮಾಡಿದ್ದ ಆರೋಪಿ, ‘ನಮ್ಮದು ಹಣ ಉಳಿತಾಯ ಕಂಪನಿ ಇದೆ. ಹಣ ದ್ವಿಗುಣಗೊಳಿಸುವ ಯೋಜನೆಗಳಿದ್ದು, ನೀವು ಹಣ ಹೂಡಿಕೆ ಮಾಡಬಹುದು. ಹಣವನ್ನು ಯಾವಾಗ ಬೇಕಾದರೂ ಬಡ್ಡಿ ಸಮೇತ ವಾಪಸು ಪಡೆಯಬಹುದು’ ಎಂದಿದ್ದರು. ಅದನ್ನು ನಂಬಿದ್ದ ದೂರುದಾರ, ಆರೋಪಿ ನೀಡಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 9.55 ಲಕ್ಷ ಜಮೆ ಮಾಡಿದ್ದ’ ಎಂದೂ ತಿಳಿಸಿದರು.