‘ಕೋನಪ್ಪನ ಅಗ್ರಹಾರದ ದೇವಿ ಅಲಿಯಾಸ್ ಅಶೋಕ್ಕುಮಾರ್ (26), ನಿತ್ಯಾ ಅಲಿಯಾಸ್ ರಾಮಕೃಷ್ಣ (24) ಹಾಗೂ ಭವನಾ ಅಲಿಯಾಸ್ ಅಬ್ದುಲ್ ಅಜೀಷ್ (31) ಎಂಬುವರೇ ಬಂಧಿತರು. ಇವರೆಲ್ಲರೂ ತಮಿಳುನಾಡಿನವರು. ನಗರಲ್ಲಿ ನೆಲೆಸಿದ್ದ ಇವರು ನಿತ್ಯವೂ ನೈಸ್ ರಸ್ತೆ ಹಾಗೂ ಇತರೆಡೆ ಭಿಕ್ಷಾಟನೆ ಮಾಡುತ್ತಿದ್ದರು. ತಮ್ಮ ಜಾಗದಲ್ಲೇ ಭಿಕ್ಷಾಟನೆ ಮಾಡುತ್ತಿದ್ದರೆಂಬ ಕಾರಣಕ್ಕೆ ರಾಜೇಂದ್ರ ಅವರನ್ನು ಕೊಂದಿದ್ದರು’ ಎಂದು ಪೊಲೀಸರು ಹೇಳಿದರು.