‘ಫೆ. 3ರಂದು ಮಧ್ಯಾಹ್ನ ಪಾರ್ವತಿಪುರದಲ್ಲಿರುವ ಮನೆ ಬಳಿ ಹೋಗಿದ್ದ ರಾಜೇಶ್ವರಿ, ಬಾಡಿಗೆ ನೀಡುವಂತೆ ಆರೋಪಿಗಳನ್ನು ಒತ್ತಾಯಿಸಿದ್ದರು. ಅದೇ ವೇಳೆ ರಾಜೇಶ್ವರಿ ಜೊತೆ ಜಗಳ ತೆಗೆದಿದ್ದ ಅಲಂಪಾಷಾ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ. ರಾಜೇಶ್ವರಿ ಅವರನ್ನು ಮನೆಯೊಳಗೆ ಎಳೆದುಕೊಂಡು ಹೋಗಿ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದ’ ಎಂದೂ ಪೊಲೀಸರು ಹೇಳಿದರು.