ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ತರಿತ ಸಂಚಾರದ ಕಾಮಗಾರಿಗಾಗಿ ಮೈಸೂರು ರಸ್ತೆ–ಕೆಂಗೇರಿ ಮೆಟ್ರೊ ಇಂದು ಸ್ಥಗಿತ

Published 16 ಆಗಸ್ಟ್ 2023, 23:32 IST
Last Updated 16 ಆಗಸ್ಟ್ 2023, 23:32 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ನೇರಳೆ ಮಾರ್ಗದಲ್ಲಿ ವಿಸ್ತರಿತ ಸಂಚಾರದ ಕಾಮಗಾರಿಗಾಗಿ ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ಆ.17ರಂದು ಮೆಟ್ರೊ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ವಿಸ್ತರಿತ ಮಾರ್ಗದಲ್ಲಿ ಸಿಗ್ನಲಿಂಗ್‌ ಮತ್ತು ಇತರ ಕಾಮಗಾರಿಗಳು ಹಮ್ಮಿಕೊಂಡಿರುವುದರಿಂದ ಈ ವ್ಯತ್ಯಯವಾಗಲಿದೆ.  ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗೆ ಮೆಟ್ರೊ ಸೇವೆ ಎಂದಿನಂತೆ ಇರಲಿದೆ. 

ಆ.23 ಮತ್ತು 24ರಂದು ಬೆಳಿಗ್ಗೆ 5ರಿಂದ ಬೆಳಿಗ್ಗೆ 7ರ ವರೆಗೆ ಇದೇ ಮಾರ್ಗದಲ್ಲಿ ಮೆಟ್ರೊ ರೈಲು ಇರುವುದಿಲ್ಲ. ಬೆಳಿಗ್ಗೆ 7ರ ನಂತರ ಎಂದಿನಂತೆ ಸಂಚಾರ ಇರಲಿದೆ.

ಆ. 20ರಿಂದ 29ರ ವರೆಗೆ ಇದೇ ನೇರಳೆ ಮಾರ್ಗದ ಇನ್ನೊಂದು ತುದಿಯಾದ ಸ್ವಾಮಿ ವಿವೇಕಾನಂದ ರಸ್ತೆ –ಬೈಯಪ್ಪನಹಳ್ಳಿ –ಕೃಷ್ಣರಾಜಪುರ–ವೈಟ್‌ಫೀಲ್ಡ್‌ (ಕಾಡುಗೋಡಿ) ನಡುವೆ ಬೆಳಿಗ್ಗೆ 5ರಿಂದ 7ರವರೆಗೆ ರೈಲು ಸಂಚಾರ ಇರುವುದಿಲ್ಲ. 

ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT