ಕಲೆಯ ಉತ್ತೇಜನಕ್ಕೆ ಮೀಸಲಾಗಿರುವ ಈ ಸಂಸ್ಥೆಯು, ನಿರಂತರವಾಗಿ ಸಾಂಸ್ಕೃತಿಕ ವಾತಾವರಣ ಸೃಷ್ಟಿಸಲು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಯತ್ನಿಸಬೇಕು. ಆದರೆ, ಧಾರ್ಮಿಕ ಹಬ್ಬಗಳನ್ನು ಪ್ರಚಾರ ಮಾಡುವುದು ಮುಜುಗರದ ಸಂಗತಿ. ಸಂಸ್ಥೆಯ ಗುಣಮಟ್ಟವನ್ನು ಹೆಚ್ಚಿಸಲು ಅಥವಾ ಯಾವುದೇ ರೀತಿಯ ನೆರವು ಅಗತ್ಯ ಇದ್ದಲ್ಲಿ ಹಳೆಯ ವಿದ್ಯಾರ್ಥಿಗಳು, ಕಲಾವಿದರು, ನಿವೃತ್ತ ಪ್ರಾಧ್ಯಾಪಕರನ್ನು ಸಂಪರ್ಕಿಸಬಹುದಾಗಿತ್ತು. ಎಲ್ಲರೂ ಸಂತೋಷದಿಂದ ನೆರವು ನೀಡಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.