<p>ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆಯ (ಎನ್ಎಸ್ಡಿ) ಬೆಂಗಳೂರು ವಿಭಾಗ ಹಮ್ಮಿಕೊಂಡಿರುವ ‘ಪೂರ್ವೋತ್ತರ್ ರಾಷ್ಟ್ರೀಯ ನಾಟ್ಯ ಉತ್ಸವ–2022’ಕ್ಕೆ ಮಂಗಳವಾರ ಚಾಲನೆ ದೊರೆತಿದೆ.</p>.<p>ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ರಮೇಶ್ ಚಂದ್ರ ಗೌರ ಮಂಗಳವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿ, ’ಸ್ವಾತಂತ್ರ್ಯದ ಅಮೃತ ಮಹೋತ್ಸದ ಅಂಗವಾಗಿ ಎನ್ಎಸ್ಡಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಈ ನಾಟಕೋತ್ಸವ ನಡೆಯಲಿದೆ. ನಗರದ ಕಲಾಗ್ರಾಮ ಮಲ್ಲತ್ತಹಳ್ಳಿಯ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಆಯೋಜಿಸಲಾಗಿದೆ‘ ಎಂದು ಅವರು ಮಾಹಿತಿ ನೀಡಿದರು.</p>.<p>‘ಜುಲೈ 16ರ ವರೆಗೆ ಈಶಾನ್ಯ ರಾಜ್ಯಗಳ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಇತರೆ ರಾಜ್ಯಗಳ ಪ್ರೇಕ್ಷಕರು ಮತ್ತು ಕಲಾವಿದರು ವಿವಿಧ ರಾಜ್ಯಗಳೊಂದಿಗೆ ಸಂಪರ್ಕ ಸಾಧಿಸಿ ಅಲ್ಲಿನ ಸಂಸ್ಕೃತಿಯನ್ನು ಅರಿತುಕೊಳ್ಳಲು ಸಹಾಯಕವಾಗಿದೆ. ನಾಟಕವು ಪ್ರೇಕ್ಷಕರ ಮನದಾಳಕ್ಕೆ ಹೊಕ್ಕುವಂತಹ ಒಂದು ಅದ್ಭುತ ಕಲೆಯಾಗಿದೆ’<br />ಎಂದು ರಮೇಶ್ ಚಂದ್ರ ಗೌರ ಅವರು ಹೇಳಿದರು.</p>.<p>‘ಜುಲೈ 13ಕ್ಕೆ ಓಯಸಿಸ್ ಸೌಗೈಜಿಮ್ ನಿರ್ದೇಶನದ ‘ಬ್ಲಡ್ ಸ್ಪಾಟ್ 2.0’, ಜುಲೈ 14ಕ್ಕೆ ಅಸ್ಸಾಮಿ ಭಾಷೆಯ, ಸಿಮಂತ್ ಫುಕನ್ ನಿರ್ದೇಶನದ ‘ರೂಪಲೀಮ್’, ಜುಲೈ 15ಕ್ಕೆ ನಾಗಾಭಾಷೆಯ ಉಟೋ ಚಿಶಿ ನಿರ್ದೇಶನದ ‘ದಿ ಚಾಂಪಿ<br />ಯನ್’ ಮತ್ತು ಜುಲೈ 16ಕ್ಕೆಮಣಿಪುರಿ ಭಾಷೆಯ ಲಾಯ್ಟಂಗ್ಬಮ್ ಪರಿನ್ಗಂಬ ನಿರ್ದೇಶನದ ‘ಹೇ ಚೆಟ್ಲೋ‘(ದೂರ ಹೋಗು) ಎಂಬ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಎಲ್ಲರಿಗೂ ಉಚಿತ ಪ್ರವೇಶವಿದೆ’ ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆಯ (ಎನ್ಎಸ್ಡಿ) ಬೆಂಗಳೂರು ವಿಭಾಗ ಹಮ್ಮಿಕೊಂಡಿರುವ ‘ಪೂರ್ವೋತ್ತರ್ ರಾಷ್ಟ್ರೀಯ ನಾಟ್ಯ ಉತ್ಸವ–2022’ಕ್ಕೆ ಮಂಗಳವಾರ ಚಾಲನೆ ದೊರೆತಿದೆ.</p>.<p>ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ರಮೇಶ್ ಚಂದ್ರ ಗೌರ ಮಂಗಳವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿ, ’ಸ್ವಾತಂತ್ರ್ಯದ ಅಮೃತ ಮಹೋತ್ಸದ ಅಂಗವಾಗಿ ಎನ್ಎಸ್ಡಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಈ ನಾಟಕೋತ್ಸವ ನಡೆಯಲಿದೆ. ನಗರದ ಕಲಾಗ್ರಾಮ ಮಲ್ಲತ್ತಹಳ್ಳಿಯ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಆಯೋಜಿಸಲಾಗಿದೆ‘ ಎಂದು ಅವರು ಮಾಹಿತಿ ನೀಡಿದರು.</p>.<p>‘ಜುಲೈ 16ರ ವರೆಗೆ ಈಶಾನ್ಯ ರಾಜ್ಯಗಳ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಇತರೆ ರಾಜ್ಯಗಳ ಪ್ರೇಕ್ಷಕರು ಮತ್ತು ಕಲಾವಿದರು ವಿವಿಧ ರಾಜ್ಯಗಳೊಂದಿಗೆ ಸಂಪರ್ಕ ಸಾಧಿಸಿ ಅಲ್ಲಿನ ಸಂಸ್ಕೃತಿಯನ್ನು ಅರಿತುಕೊಳ್ಳಲು ಸಹಾಯಕವಾಗಿದೆ. ನಾಟಕವು ಪ್ರೇಕ್ಷಕರ ಮನದಾಳಕ್ಕೆ ಹೊಕ್ಕುವಂತಹ ಒಂದು ಅದ್ಭುತ ಕಲೆಯಾಗಿದೆ’<br />ಎಂದು ರಮೇಶ್ ಚಂದ್ರ ಗೌರ ಅವರು ಹೇಳಿದರು.</p>.<p>‘ಜುಲೈ 13ಕ್ಕೆ ಓಯಸಿಸ್ ಸೌಗೈಜಿಮ್ ನಿರ್ದೇಶನದ ‘ಬ್ಲಡ್ ಸ್ಪಾಟ್ 2.0’, ಜುಲೈ 14ಕ್ಕೆ ಅಸ್ಸಾಮಿ ಭಾಷೆಯ, ಸಿಮಂತ್ ಫುಕನ್ ನಿರ್ದೇಶನದ ‘ರೂಪಲೀಮ್’, ಜುಲೈ 15ಕ್ಕೆ ನಾಗಾಭಾಷೆಯ ಉಟೋ ಚಿಶಿ ನಿರ್ದೇಶನದ ‘ದಿ ಚಾಂಪಿ<br />ಯನ್’ ಮತ್ತು ಜುಲೈ 16ಕ್ಕೆಮಣಿಪುರಿ ಭಾಷೆಯ ಲಾಯ್ಟಂಗ್ಬಮ್ ಪರಿನ್ಗಂಬ ನಿರ್ದೇಶನದ ‘ಹೇ ಚೆಟ್ಲೋ‘(ದೂರ ಹೋಗು) ಎಂಬ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಎಲ್ಲರಿಗೂ ಉಚಿತ ಪ್ರವೇಶವಿದೆ’ ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>