‘ಅ.21ರಿಂದ ಕಿರಿಯ ಪ್ರಾಥಮಿಕ ಶಾಲೆಗಳ ತರಗತಿ ಆರಂಭಿಸುವುದಾಗಿ ಸಚಿವರು ಘೋಷಿಸಿದ್ದರು. ಈಗ, ಪುನಃ ತರಗತಿ ಆರಂಭದ ಕುರಿತು ಪೋಷಕರ ಜತೆ ಚರ್ಚಿಸುವುದಾಗಿ ಹೇಳಿರುವುದು ನಿರಾಶಾದಾಯಕ ಬೆಳವಣಿಗೆ. ಸರ್ಕಾರ ಇನ್ನು ವಿಳಂಬ ಮಾಡಬಾರದು. ನಿಗದಿಯಂತೆಯೇ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೂ ತರಗತಿ ಆರಂಭಿಸಬೇಕು’ ಎಂದು ಒಕ್ಕೂಟದ ಸದಸ್ಯರಾದ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಮತ್ತು ಗುರುಮೂರ್ತಿ ಕಾಶಿನಾಥನ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.