<p><strong>ನೆಲಮಂಗಲ</strong>: ‘ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರನ್ನು ಸ್ವಾವಲಂಬಿಗಳಾಗಿಸಲು ಉಚಿತ ದ್ವಿಚಕ್ರ, ಕಾರು ಚಾಲನಾ ತರಬೇತಿಯನ್ನು ಹಿತಚಿಂತನ ಟ್ರಸ್ಟ್ ಪ್ರಾರಂಭಿಸಿದೆ’ ಎಂದು ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ವಿ.ರಾಮಸ್ವಾಮಿ ತಿಳಿಸಿದರು.</p>.<p>ತಾಲ್ಲೂಕಿನ ಬೊಮ್ಮಶೆಟ್ಟಿಹಳ್ಳಿಯಲ್ಲಿ ಟ್ರಸ್ಟ್ ಮಹಿಳೆಯರಿಗೆ ಪ್ರಾರಂಭಿಸಿರುವ ಉಚಿತ ದ್ವಿಚಕ್ರ ಮತ್ತು ಕಾರು ಚಾಲನಾ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಶಾಲೆಯ ಆವರಣದಲ್ಲಿ ವಾಹನ ತರಬೇತಿ ಕಚೇರಿ ತೆರೆದಿದ್ದು, ಮಹಿಳೆಯರು ನೋಂದಾಯಿಸಿಕೊಂಡು ಇದರ ಪ್ರಯೋಜನ ಪಡೆಯಬಹುದು’ ಎಂದರು.</p>.<p>ಟ್ರಸ್ಟ್ ಅಧ್ಯಕ್ಷೆ ಪುಟ್ಟಮ್ಮ ಮಾತನಾಡಿ, ‘ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದು, ಉಚಿತ ವಾಹನ ಚಾಲನಾ ತರಬೇತಿ ಪಡೆದು ಚಾಲಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಗೃಹಿಣಿಯರಿಗೆ ಮಕ್ಕಳನ್ನು ಶಾಲೆಗೆ ಬಿಡಲು ಹಾಗೂ ಇತರೆ ಕೆಲಸಗಳಿಗೆ ಬೇರೆಯವರ ಅವಲಂಬನೆಯನ್ನು ತಪ್ಪಿಸಲಿದೆ’ ಎಂದರು.</p>.<p>ಟ್ರಸ್ಟಿ ನರಸಿಂಹಮೂರ್ತಿ ಟ್ರಸ್ಟ್ ವತಿಯಿಂದ ವೃದ್ಧರಿಗೆ ಉಚಿತ ಕನ್ನಡಕ ವಿತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲಮಂಗಲ</strong>: ‘ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರನ್ನು ಸ್ವಾವಲಂಬಿಗಳಾಗಿಸಲು ಉಚಿತ ದ್ವಿಚಕ್ರ, ಕಾರು ಚಾಲನಾ ತರಬೇತಿಯನ್ನು ಹಿತಚಿಂತನ ಟ್ರಸ್ಟ್ ಪ್ರಾರಂಭಿಸಿದೆ’ ಎಂದು ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ವಿ.ರಾಮಸ್ವಾಮಿ ತಿಳಿಸಿದರು.</p>.<p>ತಾಲ್ಲೂಕಿನ ಬೊಮ್ಮಶೆಟ್ಟಿಹಳ್ಳಿಯಲ್ಲಿ ಟ್ರಸ್ಟ್ ಮಹಿಳೆಯರಿಗೆ ಪ್ರಾರಂಭಿಸಿರುವ ಉಚಿತ ದ್ವಿಚಕ್ರ ಮತ್ತು ಕಾರು ಚಾಲನಾ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಶಾಲೆಯ ಆವರಣದಲ್ಲಿ ವಾಹನ ತರಬೇತಿ ಕಚೇರಿ ತೆರೆದಿದ್ದು, ಮಹಿಳೆಯರು ನೋಂದಾಯಿಸಿಕೊಂಡು ಇದರ ಪ್ರಯೋಜನ ಪಡೆಯಬಹುದು’ ಎಂದರು.</p>.<p>ಟ್ರಸ್ಟ್ ಅಧ್ಯಕ್ಷೆ ಪುಟ್ಟಮ್ಮ ಮಾತನಾಡಿ, ‘ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದು, ಉಚಿತ ವಾಹನ ಚಾಲನಾ ತರಬೇತಿ ಪಡೆದು ಚಾಲಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಗೃಹಿಣಿಯರಿಗೆ ಮಕ್ಕಳನ್ನು ಶಾಲೆಗೆ ಬಿಡಲು ಹಾಗೂ ಇತರೆ ಕೆಲಸಗಳಿಗೆ ಬೇರೆಯವರ ಅವಲಂಬನೆಯನ್ನು ತಪ್ಪಿಸಲಿದೆ’ ಎಂದರು.</p>.<p>ಟ್ರಸ್ಟಿ ನರಸಿಂಹಮೂರ್ತಿ ಟ್ರಸ್ಟ್ ವತಿಯಿಂದ ವೃದ್ಧರಿಗೆ ಉಚಿತ ಕನ್ನಡಕ ವಿತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>