ಕೆ.ಆರ್.ಪುರ: ಸ್ವಾತಂತ್ರ್ಯ ದಿನದ ಅಂಗವಾಗಿಕಯಾಕಿಂಗ್ ಮತ್ತು ಕ್ಯಾನೋಯಿಂಗ್ ಅಸೋಸಿಯೇಷನ್ ವತಿಯಿಂದ ಮೇಡಹಳ್ಳಿಯ ಎಲೆಮಲ್ಲಪ್ಪ ಶೆಟ್ಟಿ ಕೆರೆಯಲ್ಲಿ ದೋಣಿ ಓಡಿಸುವ ಸ್ಪರ್ಧೆಯನ್ನು ಭಾನುವಾರ ಆಯೋಜಿಸಲಾಗಿತ್ತು.
ಸ್ಪರ್ಧೆಗೆ ಬಿಜೆಪಿ ಮುಖಂಡ ಬಿ.ಎನ್.ಜಯಪ್ರಕಾಶ್ ಚಾಲನೆ ನೀಡಿದರು.
ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ಕ್ಯಾನೋಯಿಂಗ್, ಕಯಾಕಿಂಗ್, ರೋಯಿಂಗ್ ಪಟುಗಳು ಪಾಲ್ಗೊಂಡಿದ್ದರು. ಸ್ಪರ್ಧೆಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಕ್ಯಾಪ್ಟನ್ ದಿಲೀಪ್ ಕುಮಾರ್, ದೇವಯ್ಯ, ಆನಂತರಾಜು, ರಾಮರತ್ಮಮ್ಮ, ಪ್ರಶಾಂತ್ ಕೋರೆ, ಅಯ್ಯಪ್ಪ ಹಾಗೂ ಇತರರು ಇದ್ದರು.