<p><strong>ಬೆಂಗಳೂರು:</strong> ಸಾಧನೆಗೆ ದೈಹಿಕ ದೌರ್ಬಲ್ಯ ಅಡ್ಡಿಯಾಗುವುದಿಲ್ಲ ಎಂದು ಅಂತರರಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಪಟು ಪದ್ಮಶ್ರೀ ಮಾಲತಿ ಕೆ.ಹೊಳ್ಳ ಅಭಿಪ್ರಾಯಪಟ್ಟರು.</p>.<p>ಬೆಂಗಳೂರು ವಿಶ್ವವಿದ್ಯಾಲಯ ವಿಶೇಷ ಚೇತನರ ಅಭಿವೃದ್ಧಿ ವಿಭಾಗದಿಂದ ಹಮ್ಮಿಕೊಂಡಿದ್ದ ‘ಕಲಾ ಚೈತನ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ದೈಹಿಕವಾಗಿ ಕೊರತೆ ಅನುಭವಿಸಿದರೂ ಮಾನಸಿಕವಾಗಿ ಕುಗ್ಗಬಾರದು. ನಿರ್ದಿಷ್ಟ ಗುರಿಯತ್ತ ಕೇಂದ್ರೀಕರಿಸಿ ಸಬಲರಂತೆ ಕ್ರಿಯಾಶೀಲರಾಗಬೇಕು. ಆತ್ಮಸ್ಥೈರ್ಯದ ಕೊರತೆ ಮನುಜನ್ನು ಅಧೀರಗೊಳಿಸುತ್ತದೆ. ಸೋಲಿನತ್ತ ಕೊಂಡೊಯ್ಯುತ್ತದೆ. ಅಂತಹ ಮನಃಸ್ಥಿತಿಯನ್ನು ವಿಶೇಷ ಚೇತನರು ಮೊದಲು ಕಿತ್ತೊಗೊಯಬೇಕು’ ಎಂದರು.</p>.<p>ವಿಶೇಷ ಚೇತನ ಮಕ್ಕಳಿಗೆ ತ್ರಿಚಕ್ರ ವಾಹನವನ್ನು ನೀಡುವ ಯೋಜನೆಯನ್ನು ಹಲವಾರು ವರ್ಷಗಳ ಹಿಂದೆಯೇ ರೂಪಿಸಲಾಗಿತ್ತು. ಇದೀಗ ಯೋಜನೆಯು ಕಾರ್ಯ ರೂಪಕ್ಕೆ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು ವಿದ್ಯಾಭ್ಯಾಸಕ್ಕೆ ಮತ್ತಷ್ಟು ಕಾಲವಕಾಶ ದೊರೆಯಲಿದೆ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಹೇಳಿದರು.</p>.<p>ಅಮೇರಿಕವನ್ನು ಆಳಿದ ರಾಷ್ಟ್ರಾಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಮತ್ತು ವಿಶ್ವ ಕಂಡ ಅತ್ಯಂತ ಶ್ರೇಷ್ಠ ಪ್ರಾಧ್ಯಾಪಕಿ ಹೆಲನ್ ಕೆಲ್ಲರ್ ಕೂಡಾ ವಿಶೇಷ ಚೇತನರಾಗಿದ್ದರು. ಇತರರಿಗೆ ಹೋಲಿಸಿದರೆ ವಿಶೇಷ ಚೇತನರು ಅತ್ಯಂತ ಸೂಕ್ಷ್ಮ ಮತಿಗಳಾಗಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಗಾಯನ ವಿಭಾಗದಲ್ಲಿ ಹಲವಾರು ವಿಶೇಷ ಚೇತನರು ಅಪ್ರತಿಮ ಸಾಧನೆ ಮೆರೆದಿದ್ದಾರೆ. ಅವಕಾಶಗಳು ದೊರೆತರೆ ಇನ್ನಷ್ಟು ಸಾಧನೆ ಮಾಡಬಲ್ಲರು ಎಂದು ಕುಲ ಸಚಿವ ಬಿ.ಕೆ.ರವಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಾಧನೆಗೆ ದೈಹಿಕ ದೌರ್ಬಲ್ಯ ಅಡ್ಡಿಯಾಗುವುದಿಲ್ಲ ಎಂದು ಅಂತರರಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಪಟು ಪದ್ಮಶ್ರೀ ಮಾಲತಿ ಕೆ.ಹೊಳ್ಳ ಅಭಿಪ್ರಾಯಪಟ್ಟರು.</p>.<p>ಬೆಂಗಳೂರು ವಿಶ್ವವಿದ್ಯಾಲಯ ವಿಶೇಷ ಚೇತನರ ಅಭಿವೃದ್ಧಿ ವಿಭಾಗದಿಂದ ಹಮ್ಮಿಕೊಂಡಿದ್ದ ‘ಕಲಾ ಚೈತನ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ದೈಹಿಕವಾಗಿ ಕೊರತೆ ಅನುಭವಿಸಿದರೂ ಮಾನಸಿಕವಾಗಿ ಕುಗ್ಗಬಾರದು. ನಿರ್ದಿಷ್ಟ ಗುರಿಯತ್ತ ಕೇಂದ್ರೀಕರಿಸಿ ಸಬಲರಂತೆ ಕ್ರಿಯಾಶೀಲರಾಗಬೇಕು. ಆತ್ಮಸ್ಥೈರ್ಯದ ಕೊರತೆ ಮನುಜನ್ನು ಅಧೀರಗೊಳಿಸುತ್ತದೆ. ಸೋಲಿನತ್ತ ಕೊಂಡೊಯ್ಯುತ್ತದೆ. ಅಂತಹ ಮನಃಸ್ಥಿತಿಯನ್ನು ವಿಶೇಷ ಚೇತನರು ಮೊದಲು ಕಿತ್ತೊಗೊಯಬೇಕು’ ಎಂದರು.</p>.<p>ವಿಶೇಷ ಚೇತನ ಮಕ್ಕಳಿಗೆ ತ್ರಿಚಕ್ರ ವಾಹನವನ್ನು ನೀಡುವ ಯೋಜನೆಯನ್ನು ಹಲವಾರು ವರ್ಷಗಳ ಹಿಂದೆಯೇ ರೂಪಿಸಲಾಗಿತ್ತು. ಇದೀಗ ಯೋಜನೆಯು ಕಾರ್ಯ ರೂಪಕ್ಕೆ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು ವಿದ್ಯಾಭ್ಯಾಸಕ್ಕೆ ಮತ್ತಷ್ಟು ಕಾಲವಕಾಶ ದೊರೆಯಲಿದೆ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಹೇಳಿದರು.</p>.<p>ಅಮೇರಿಕವನ್ನು ಆಳಿದ ರಾಷ್ಟ್ರಾಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಮತ್ತು ವಿಶ್ವ ಕಂಡ ಅತ್ಯಂತ ಶ್ರೇಷ್ಠ ಪ್ರಾಧ್ಯಾಪಕಿ ಹೆಲನ್ ಕೆಲ್ಲರ್ ಕೂಡಾ ವಿಶೇಷ ಚೇತನರಾಗಿದ್ದರು. ಇತರರಿಗೆ ಹೋಲಿಸಿದರೆ ವಿಶೇಷ ಚೇತನರು ಅತ್ಯಂತ ಸೂಕ್ಷ್ಮ ಮತಿಗಳಾಗಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಗಾಯನ ವಿಭಾಗದಲ್ಲಿ ಹಲವಾರು ವಿಶೇಷ ಚೇತನರು ಅಪ್ರತಿಮ ಸಾಧನೆ ಮೆರೆದಿದ್ದಾರೆ. ಅವಕಾಶಗಳು ದೊರೆತರೆ ಇನ್ನಷ್ಟು ಸಾಧನೆ ಮಾಡಬಲ್ಲರು ಎಂದು ಕುಲ ಸಚಿವ ಬಿ.ಕೆ.ರವಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>