ಶುಚಿ ಹಾಗೂ ರುಚಿಯಾದ ಊಟ–ತಿಂಡಿಯನ್ನು ರೋಗಿಗಳಿಗೆ ವಿತರಿಸುತ್ತಿದ್ದೇವೆ. ಸರಿಯಾದ ಸಮಯಕ್ಕೆ ಆಹಾರವನ್ನು ಪೂರೈಸುತ್ತಿದ್ದು ಈ ಕಾರ್ಯ ನಮಗೂ ತೃಪ್ತಿ ನೀಡಿದೆ
ಶಿವಪ್ಪ ಮೇಲ್ವಿಚಾರಕ ಇಸ್ಕಾನ್
ರೋಗಿಗಳಿಗೆ ಅಧಿಕ ಪೋಷಕಾಂಶಯುಕ್ತ ಆಹಾರ ಅಗತ್ಯ. ಅದನ್ನು ಗಮನದಲ್ಲಿಟ್ಟುಕೊಂಡು ಆಹಾರ ‘ಮೆನು’ ತಯಾರಿಸಿ ಊಟ–ತಿಂಡಿ ವಿತರಿಸಲಾಗುತ್ತಿದೆ
ಡಾ.ಶಶಿಕಲಾ ಸ್ಥಾನಿಕ ವೈದ್ಯಾಧಿಕಾರಿ ಸರ್ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ
ವಿಶೇಷ ಪೌಷ್ಟಿಕ ಆಹಾರ ಯೋಜನೆಯಡಿ ನೀಡಲಾಗುತ್ತಿರುವ ಊಟ–ತಿಂಡಿ ಗುಣಮಟ್ಟದಿಂದ ಕೂಡಿದೆ. ಆಹಾರವನ್ನು ವ್ಯರ್ಥ ಮಾಡದೆ ಸೇವಿಸುತ್ತಿದ್ದೇವೆ. ಹೊರಗಡೆಯಿಂದ ಊಟ–ತಿಂಡಿ ತರಿಸಿಕೊಳ್ಳುವುದು ತಪ್ಪಿದೆ.
ಸೆಲ್ವಿ ಎಚ್ಎಎಲ್ ನಿವಾಸಿ
ಇಸ್ಕಾನ್ನವರು ಊಟ–ತಿಂಡಿಯನ್ನು ಸಮಯಕ್ಕೆ ಸರಿಯಾಗಿ ಒದಗಿಸುತ್ತಿದ್ದಾರೆ. ಆಹಾರದಲ್ಲಿ ಹೆಚ್ಚಿನ ಪೋಷಕಾಂಶಗಳು ಇರುವುದರಿಂದ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿಯ ಊಟ–ತಿಂಡಿ ದೊರೆಯುವಂತಾಗಬೇಕು