ಈ ವೇಳೆ ಮಾತನಾಡಿದ ಆರ್ಥಿಕ ತಜ್ಞ ಬಿ.ಎಂ.ಕುಮಾರಸ್ವಾಮಿ, 'ತಿದ್ದುಪಡಿ ಮೂಲಕ ರೈತರಲ್ಲದವರಿಗೆ ಕೃಷಿ ಭೂಮಿ ಖರೀದಿಗೆ ಅವಕಾಶ ಕೊಡುವುದು ಸ್ವಾಗತಾರ್ಹ. ಆದರೆ, ಭೂಮಿಯನ್ನು ಕೃಷಿಗೆ ಹೊರತುಪಡಿಸಿ ಕೈಗಾರಿಕೆಗಳ ಉದ್ದೇಶಗಳಿಗೆ ಬಳಸಬಾರದು ಹಾಗೂ ಮಾರಾಟವೂ ಮಾಡಬಾರದು ಎಂಬ ಷರತ್ತು ವಿಧಿಸಬೇಕಿತ್ತು. ಕಾಯ್ದೆಗೆ ತಿದ್ದುಪಡಿ ತರುವ ಮೊದಲು ರೈತ ಸಂಘಟನೆಗಳೊಂದಿಗೆ ಚರ್ಚಿಸಬೇಕಿತ್ತು. ವಿಷಯ ಪರಿಣತರ ಸಮಿತಿ ರಚಿಸಿ, ಸಲಹೆ ಪಡೆಯಬೇಕಿತ್ತು' ಎಂದರು.