<p><strong>ಬೆಂಗಳೂರು:</strong> ಹೊಸ ವರ್ಷದ ಮೊದಲ ದಿನದಂದು ನಗರದಲ್ಲಿ ಪಾದಚಾರಿಗಳ ಸುರಕ್ಷತೆ, ಅವರು ನಡೆದು ಹೋಗಬಹುದಾದ ಮಹತ್ವವನ್ನು ಒತ್ತಿ ಹೇಳುವ ಉದ್ದೇಶದಿಂದ, ವಿಶ್ವದ ಅತಿ ಉದ್ದದ 26 ಕಿ.ಮೀ. ಸಮೂಹ ಪಾದಚಾರಿ ‘ಫುಟ್ಪಾತ್ ನಡಿಗೆ’ ನಡೆಯಿತು.</p>.<p>ಗುರುವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾದ ‘ಫುಟ್ಪಾತ್ ನಡಿಗೆ’ಯಲ್ಲಿ ಒಂಬತ್ತು ವರ್ಷದಿಂದ 76 ವರ್ಷ ವಯಸ್ಸಿನ 300ಕ್ಕೂ ಹೆಚ್ಚು ನಾಗರಿಕರು/ಪಾದಚಾರಿಗಳು ಭಾಗವಹಿಸಿದ್ದರು. ನಿಗದಿತ ಮಾರ್ಗದಲ್ಲಿ ಸಂಪೂರ್ಣವಾಗಿ ಫುಟ್ಪಾತ್ಗಳಲ್ಲೇ ನಡೆದು, ಸಂಜೆ 6.30ರವರೆಗೆ 165 ಮಂದಿ 26 ಕಿ.ಮೀ. ದೂರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.</p>.<p>ಆರ್.ವಿ. ರಸ್ತೆ, ಜಯನಗರ, ಸಿದ್ದಾಪುರ, ಲಾಲ್ಬಾಗ್, ಕೆ.ಎಚ್. ರಸ್ತೆ, ಕೆ-100 ಮಾರ್ಗ, ಹೊಸೂರು ರಸ್ತೆ, ರಿಚ್ಮಂಡ್ ರಸ್ತೆ, ಕಬ್ಬನ್ ಪಾರ್ಕ್, ವಿಧಾನಸೌಧ, ಕಬ್ಬನ್ ರಸ್ತೆ, ಹಲಸೂರು ಕೆರೆ, ಕಂಟೋನ್ಮೆಂಟ್ ರೈಲು ನಿಲ್ದಾಣ, ಜಯಮಹಲ್, ಮೇಖ್ರಿ ವೃತ್ತ ಹಾಗೂ ಯಶವಂತಪುರ ಪ್ರದೇಶಗಳಲ್ಲಿ ನಡಿಗೆ ನಡೆಯಿತು.</p>.<p>ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ದಕ್ಷಿಣ, ಪಶ್ಚಿಮ ಮತ್ತು ಉತ್ತರ ನಗರ ಪಾಲಿಕೆಗಳ ಆಯುಕ್ತರು ಪಾಲ್ಗೊಂಡಿದ್ದರು.</p>.<p>ವಾಕಲೂರು ಯೋಜನೆಯ ಸಮನ್ವಯಕರಾದ ಅರುಣ್ ಪೈ ಅವರ ನೇತೃತ್ವದಲ್ಲಿ ನಡಿಗೆ ಕಾರ್ಯಕ್ರಮ ನಡೆಯಿತು ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಹೊಸ ವರ್ಷದ ಮೊದಲ ದಿನದಂದು ನಗರದಲ್ಲಿ ಪಾದಚಾರಿಗಳ ಸುರಕ್ಷತೆ, ಅವರು ನಡೆದು ಹೋಗಬಹುದಾದ ಮಹತ್ವವನ್ನು ಒತ್ತಿ ಹೇಳುವ ಉದ್ದೇಶದಿಂದ, ವಿಶ್ವದ ಅತಿ ಉದ್ದದ 26 ಕಿ.ಮೀ. ಸಮೂಹ ಪಾದಚಾರಿ ‘ಫುಟ್ಪಾತ್ ನಡಿಗೆ’ ನಡೆಯಿತು.</p>.<p>ಗುರುವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾದ ‘ಫುಟ್ಪಾತ್ ನಡಿಗೆ’ಯಲ್ಲಿ ಒಂಬತ್ತು ವರ್ಷದಿಂದ 76 ವರ್ಷ ವಯಸ್ಸಿನ 300ಕ್ಕೂ ಹೆಚ್ಚು ನಾಗರಿಕರು/ಪಾದಚಾರಿಗಳು ಭಾಗವಹಿಸಿದ್ದರು. ನಿಗದಿತ ಮಾರ್ಗದಲ್ಲಿ ಸಂಪೂರ್ಣವಾಗಿ ಫುಟ್ಪಾತ್ಗಳಲ್ಲೇ ನಡೆದು, ಸಂಜೆ 6.30ರವರೆಗೆ 165 ಮಂದಿ 26 ಕಿ.ಮೀ. ದೂರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.</p>.<p>ಆರ್.ವಿ. ರಸ್ತೆ, ಜಯನಗರ, ಸಿದ್ದಾಪುರ, ಲಾಲ್ಬಾಗ್, ಕೆ.ಎಚ್. ರಸ್ತೆ, ಕೆ-100 ಮಾರ್ಗ, ಹೊಸೂರು ರಸ್ತೆ, ರಿಚ್ಮಂಡ್ ರಸ್ತೆ, ಕಬ್ಬನ್ ಪಾರ್ಕ್, ವಿಧಾನಸೌಧ, ಕಬ್ಬನ್ ರಸ್ತೆ, ಹಲಸೂರು ಕೆರೆ, ಕಂಟೋನ್ಮೆಂಟ್ ರೈಲು ನಿಲ್ದಾಣ, ಜಯಮಹಲ್, ಮೇಖ್ರಿ ವೃತ್ತ ಹಾಗೂ ಯಶವಂತಪುರ ಪ್ರದೇಶಗಳಲ್ಲಿ ನಡಿಗೆ ನಡೆಯಿತು.</p>.<p>ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ದಕ್ಷಿಣ, ಪಶ್ಚಿಮ ಮತ್ತು ಉತ್ತರ ನಗರ ಪಾಲಿಕೆಗಳ ಆಯುಕ್ತರು ಪಾಲ್ಗೊಂಡಿದ್ದರು.</p>.<p>ವಾಕಲೂರು ಯೋಜನೆಯ ಸಮನ್ವಯಕರಾದ ಅರುಣ್ ಪೈ ಅವರ ನೇತೃತ್ವದಲ್ಲಿ ನಡಿಗೆ ಕಾರ್ಯಕ್ರಮ ನಡೆಯಿತು ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>