<p><strong>ಬೆಂಗಳೂರು</strong>: ಲಾಕ್ಡೌನ್ ವೇಳೆ ಕೋವಿಡ್ ಸೋಂಕಿತರ ಚಿಕಿತ್ಸೆಗೆಂದು ಆಮ್ಲಜನಕ ಒದಗಿಸಿದ್ದ ಕೈಗಾರಿಕೆಗಳಿಗೇ ಈಗ ಆಮ್ಲಜನಕ ನೀಡಿ ಜೀವಕಳೆ ತುಂಬುವ ಅಗತ್ಯವಿದೆ. ಸರ್ಕಾರ ಲಾಕ್ಡೌನ್ ಸಡಿಲಗೊಳಿಸಿದರೂ ಆಮ್ಲಜನಕ ದೊರಕದಿದ್ದರೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸಾವಿರಾರು ಕೈಗಾರಿಕೆಗಳು ತೆರೆಯಲಾಗದ ಸ್ಥಿತಿಯಲ್ಲಿವೆ.</p>.<p>ಲಾಕ್ಡೌನ್ಗೂ ಮುನ್ನ ಕೋವಿಡ್ ರೋಗಿಗಳಿಗೆ ಆಮ್ಲಜನಕ ಕೊರತೆಯಾದಾಗ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದ್ದ ಆಮ್ಲಜನಕವನ್ನೇ ಆಸ್ಪತ್ರೆಗಳಿಗೆ ಪೂರೈಸಲಾಯಿತು. ಪರಿಸ್ಥಿತಿ ಸುಧಾರಿಸುವ ತನಕ ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆ ಮಾಡದಂತೆಯೂ ಆಮ್ಲಜನಕ ತಯಾರಿಕಾ ಕಂಪನಿಗಳಿಗೆ ಸರ್ಕಾರ ಸೂಚಿಸಿತು. ಪೊಲೀಸ್ ಭದ್ರತೆ ನೀಡಿ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಪೂರೈಸಲಾಯಿತು.</p>.<p>‘ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿದ್ದರೆ, ಅವುಗಳಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಆಮ್ಲಜನಕ ಆಧಾರಿತ ಚಾಲನೆಯನ್ನು ಹೊಂದಿವೆ. ಆಮ್ಲಜನಕ ಇಲ್ಲದೆ ಈ ಕೈಗಾರಿಕೆಗಳ ಕಾರ್ಯನಿರ್ವಹಣೆ ಸಾಧ್ಯವೇ ಇಲ್ಲ’ ಎನ್ನುತ್ತಾರೆ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಸಿ. ಪ್ರಕಾಶ್.</p>.<p>‘ಜೀವ ಮೊದಲು, ಜೀವನ ಆ ನಂತರ ಎಂಬ ಕಾರಣಕ್ಕೆ ಆಮ್ಲಜನಕದ ವೈದ್ಯಕೀಯ ಬಳಕೆಗೆ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ನಾವೂ ಸಮ್ಮತಿಸಿದೆವು. ಈಗ ವೈದ್ಯಕೀಯ ಬಳಕೆಗೆ ಪೂರೈಕೆಯಾಗಿ ಮಿಗುವಷ್ಟು ಆಮ್ಲಜನಕ ತಯಾರಾಗುತ್ತಿದೆ. ಈ ಹೆಚ್ಚುವರಿ ಆಮ್ಲಜನಕವನ್ನು ಈಗಲಾದರೂ ಕೈಗಾರಿಕೆಗಳಿಗೆ ಪೂರೈಲು ತಯಾರಿಕಾ ಕಂಪನಿಗಳಿಗೆ ಸರ್ಕಾರ ಅನುಮತಿ ನೀಡಬೇಕು’ ಎಂದು ಅವರು ಮನವಿ ಮಾಡಿದರು.</p>.<p>‘ಈ ಅನುಮತಿ ನೀಡದೆ ಲಾಕ್ಡೌನ್ ತೆರವುಗೊಳಿಸಿದರೆ ಕೈಗಾರಿಕೆಗಳನ್ನು ಪುನರ್ ಆರಂಭಿಸಲು ಸಾಧ್ಯವಾಗುವುದಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ’ ಎಂದು ಅವರು ವಿವರಿಸಿದರು.</p>.<p>‘ಕೋವಿಡ್ ನಿಯಂತ್ರಣ ಆಗಬೇಕು ಎಂಬ ಕಾರಣಕ್ಕೆ ಒಂದೂವರೆ ತಿಂಗಳಿಂದ ಸರ್ಕಾರದ ನಿರ್ಧಾರಕ್ಕೆ ತಲೆಬಾಗಿ ಬೆಂಬಲಿಸಿದ್ದೇವೆ. ಈಗ ನಮ್ಮ ಮನವಿಗೂ ಸರ್ಕಾರ ಸ್ಪಂದಿಸಬೇಕು. ಕೈಗಾರಿಕೆಗಳಲ್ಲಿ ಶೇ 50ರಷ್ಟು ಕಾರ್ಮಿಕರನ್ನು ನಿಯೋಜಿಸಿಕೊಂಡು ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.</p>.<p class="Briefhead"><strong>ವಿದ್ಯುತ್ ಶುಲ್ಕ ಮನ್ನಾಕ್ಕೆ ಒತ್ತಾಯ</strong></p>.<p>‘ಲಾಕ್ಡೌನ್ ಕಾರಣಕ್ಕೆ ಕೈಗಾರಿಕೆಗಳನ್ನು ತೆರೆಯದೇ ಇದ್ದರೂ, ಬೆಸ್ಕಾಂ ನಿಗದಿತ ಶುಲ್ಕ ವಿಧಿಸುತ್ತದೆ. ಸಂಕಷ್ಟದ ಸಂದರ್ಭದಲ್ಲಿ ಇದನ್ನು ಪಾವತಿಸುವುದು ಕಷ್ಟವಾಗಿರುವ ಕಾರಣ ಶುಲ್ಕ ಮನ್ನಾ ಮಾಡಬೇಕು’ ಎಂದು ಸಿ. ಪ್ರಕಾಶ್ ಒತ್ತಾಯಿಸಿದರು.</p>.<p>ಶೇ 9ರಷ್ಟು ರಾಜ್ಯ ತೆರಿಗೆಯೂ ವಿದ್ಯುತ್ ಶುಲ್ಕದ ಜತೆಗೆ ಸೇರಿಕೊಳ್ಳುತ್ತಿದ್ದು, ಅದನ್ನೂ ಮನ್ನಾ ಮಾಡಬೇಕು. ಸಾಲದ ಕಂತು ಪಾವತಿ (ಇಎಂಐ) ಅವಧಿಯನ್ನು ಮುಂದೂಡಲು ಕೆಎಸ್ಎಫ್ಸಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.</p>.<p>‘ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಈ ಉದ್ಯಮಕ್ಕೆ ಯೋಧರಿದ್ದಂತೆ. ತಯಾರಿಕಾ ಕ್ಷೇತ್ರ ಆಗಿರುವ ಕಾರಣ ಅವರನ್ನು ಮುಂಚೂಣಿ ಕೆಲಸಗಾರರು ಎಂದು ಪರಿಗಣಿಸಿ 18ರಿಂದ 44 ವರ್ಷದವರಿಗೂ ಕೋವಿಡ್ ಲಸಿಕೆ ನೀಡಲು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಲಾಕ್ಡೌನ್ ವೇಳೆ ಕೋವಿಡ್ ಸೋಂಕಿತರ ಚಿಕಿತ್ಸೆಗೆಂದು ಆಮ್ಲಜನಕ ಒದಗಿಸಿದ್ದ ಕೈಗಾರಿಕೆಗಳಿಗೇ ಈಗ ಆಮ್ಲಜನಕ ನೀಡಿ ಜೀವಕಳೆ ತುಂಬುವ ಅಗತ್ಯವಿದೆ. ಸರ್ಕಾರ ಲಾಕ್ಡೌನ್ ಸಡಿಲಗೊಳಿಸಿದರೂ ಆಮ್ಲಜನಕ ದೊರಕದಿದ್ದರೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸಾವಿರಾರು ಕೈಗಾರಿಕೆಗಳು ತೆರೆಯಲಾಗದ ಸ್ಥಿತಿಯಲ್ಲಿವೆ.</p>.<p>ಲಾಕ್ಡೌನ್ಗೂ ಮುನ್ನ ಕೋವಿಡ್ ರೋಗಿಗಳಿಗೆ ಆಮ್ಲಜನಕ ಕೊರತೆಯಾದಾಗ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದ್ದ ಆಮ್ಲಜನಕವನ್ನೇ ಆಸ್ಪತ್ರೆಗಳಿಗೆ ಪೂರೈಸಲಾಯಿತು. ಪರಿಸ್ಥಿತಿ ಸುಧಾರಿಸುವ ತನಕ ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆ ಮಾಡದಂತೆಯೂ ಆಮ್ಲಜನಕ ತಯಾರಿಕಾ ಕಂಪನಿಗಳಿಗೆ ಸರ್ಕಾರ ಸೂಚಿಸಿತು. ಪೊಲೀಸ್ ಭದ್ರತೆ ನೀಡಿ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಪೂರೈಸಲಾಯಿತು.</p>.<p>‘ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿದ್ದರೆ, ಅವುಗಳಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಆಮ್ಲಜನಕ ಆಧಾರಿತ ಚಾಲನೆಯನ್ನು ಹೊಂದಿವೆ. ಆಮ್ಲಜನಕ ಇಲ್ಲದೆ ಈ ಕೈಗಾರಿಕೆಗಳ ಕಾರ್ಯನಿರ್ವಹಣೆ ಸಾಧ್ಯವೇ ಇಲ್ಲ’ ಎನ್ನುತ್ತಾರೆ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಸಿ. ಪ್ರಕಾಶ್.</p>.<p>‘ಜೀವ ಮೊದಲು, ಜೀವನ ಆ ನಂತರ ಎಂಬ ಕಾರಣಕ್ಕೆ ಆಮ್ಲಜನಕದ ವೈದ್ಯಕೀಯ ಬಳಕೆಗೆ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ನಾವೂ ಸಮ್ಮತಿಸಿದೆವು. ಈಗ ವೈದ್ಯಕೀಯ ಬಳಕೆಗೆ ಪೂರೈಕೆಯಾಗಿ ಮಿಗುವಷ್ಟು ಆಮ್ಲಜನಕ ತಯಾರಾಗುತ್ತಿದೆ. ಈ ಹೆಚ್ಚುವರಿ ಆಮ್ಲಜನಕವನ್ನು ಈಗಲಾದರೂ ಕೈಗಾರಿಕೆಗಳಿಗೆ ಪೂರೈಲು ತಯಾರಿಕಾ ಕಂಪನಿಗಳಿಗೆ ಸರ್ಕಾರ ಅನುಮತಿ ನೀಡಬೇಕು’ ಎಂದು ಅವರು ಮನವಿ ಮಾಡಿದರು.</p>.<p>‘ಈ ಅನುಮತಿ ನೀಡದೆ ಲಾಕ್ಡೌನ್ ತೆರವುಗೊಳಿಸಿದರೆ ಕೈಗಾರಿಕೆಗಳನ್ನು ಪುನರ್ ಆರಂಭಿಸಲು ಸಾಧ್ಯವಾಗುವುದಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ’ ಎಂದು ಅವರು ವಿವರಿಸಿದರು.</p>.<p>‘ಕೋವಿಡ್ ನಿಯಂತ್ರಣ ಆಗಬೇಕು ಎಂಬ ಕಾರಣಕ್ಕೆ ಒಂದೂವರೆ ತಿಂಗಳಿಂದ ಸರ್ಕಾರದ ನಿರ್ಧಾರಕ್ಕೆ ತಲೆಬಾಗಿ ಬೆಂಬಲಿಸಿದ್ದೇವೆ. ಈಗ ನಮ್ಮ ಮನವಿಗೂ ಸರ್ಕಾರ ಸ್ಪಂದಿಸಬೇಕು. ಕೈಗಾರಿಕೆಗಳಲ್ಲಿ ಶೇ 50ರಷ್ಟು ಕಾರ್ಮಿಕರನ್ನು ನಿಯೋಜಿಸಿಕೊಂಡು ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.</p>.<p class="Briefhead"><strong>ವಿದ್ಯುತ್ ಶುಲ್ಕ ಮನ್ನಾಕ್ಕೆ ಒತ್ತಾಯ</strong></p>.<p>‘ಲಾಕ್ಡೌನ್ ಕಾರಣಕ್ಕೆ ಕೈಗಾರಿಕೆಗಳನ್ನು ತೆರೆಯದೇ ಇದ್ದರೂ, ಬೆಸ್ಕಾಂ ನಿಗದಿತ ಶುಲ್ಕ ವಿಧಿಸುತ್ತದೆ. ಸಂಕಷ್ಟದ ಸಂದರ್ಭದಲ್ಲಿ ಇದನ್ನು ಪಾವತಿಸುವುದು ಕಷ್ಟವಾಗಿರುವ ಕಾರಣ ಶುಲ್ಕ ಮನ್ನಾ ಮಾಡಬೇಕು’ ಎಂದು ಸಿ. ಪ್ರಕಾಶ್ ಒತ್ತಾಯಿಸಿದರು.</p>.<p>ಶೇ 9ರಷ್ಟು ರಾಜ್ಯ ತೆರಿಗೆಯೂ ವಿದ್ಯುತ್ ಶುಲ್ಕದ ಜತೆಗೆ ಸೇರಿಕೊಳ್ಳುತ್ತಿದ್ದು, ಅದನ್ನೂ ಮನ್ನಾ ಮಾಡಬೇಕು. ಸಾಲದ ಕಂತು ಪಾವತಿ (ಇಎಂಐ) ಅವಧಿಯನ್ನು ಮುಂದೂಡಲು ಕೆಎಸ್ಎಫ್ಸಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.</p>.<p>‘ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಈ ಉದ್ಯಮಕ್ಕೆ ಯೋಧರಿದ್ದಂತೆ. ತಯಾರಿಕಾ ಕ್ಷೇತ್ರ ಆಗಿರುವ ಕಾರಣ ಅವರನ್ನು ಮುಂಚೂಣಿ ಕೆಲಸಗಾರರು ಎಂದು ಪರಿಗಣಿಸಿ 18ರಿಂದ 44 ವರ್ಷದವರಿಗೂ ಕೋವಿಡ್ ಲಸಿಕೆ ನೀಡಲು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>