ಬಿಬಿಎಂಪಿ ವ್ಯಾಪ್ತಿಯಲ್ಲಿ 16 ಚಿತಾಗಾರಗಳು ಕಾರ್ಯನಿರ್ವಹಿಸುತ್ತಿವೆ. ಕೋವಿಡ್ನಿಂದಾಗಿ ಮೃತಪಟ್ಟವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಈ ಚಿತಾಗಾರಗಳ ಮೇಲೆ ಹೆಚ್ಚಿನ ಒತ್ತಡ ನಿರ್ಮಾಣವಾಗುತ್ತಿದೆ. ಈ ಒತ್ತಡ ಕಡಿಮೆ ಮಾಡಲು ಗಿಡ್ಡೇನಹಳ್ಳಿ, ತಾವರೆಕೆರೆ, ಮಾವಳ್ಳಿಪುರ ಮತ್ತು ಟಿ.ಆರ್.ಮಿಲ್ಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ನಾಲ್ಕು ಹೊಸ ಚಿತಾಗಾರಗಳನ್ನು ಸ್ಥಾಪಿಸಲಾಗಿದೆ. ಈ ನಾಲ್ಕು ಚಿತಾಗಾರಗಳಲ್ಲಿ ನಿತ್ಯ ಸರಾಸರಿ 150 ಮೃತದೇಹಗಳ ಅಂತ್ಯಕ್ರಿಯೆ ನಡೆಯುತ್ತಿದೆ. ಇಲ್ಲಿ ಕಬ್ಬಿಣದ ಕ್ರೇಟ್ಗಳನ್ನು ಬಳಸುವುದರಿಂದಅಂತ್ಯಕ್ರಿಯೆಗೆ ಕಡಿಮೆ ಅವಧಿ ಸಾಕಾಗುತ್ತದೆ.