ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‍ಡೌನ್ ಸಡಿಲಿಕೆ | ವಾಯುವಿಹಾರಕ್ಕೆ ಸಾಲುಗಟ್ಟಿ ನಿಂತ ಜನ

Last Updated 19 ಮೇ 2020, 8:52 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‍ಡೌನ್ ಸಡಿಲಿಸಿ, ಉದ್ಯಾನಗಳಲ್ಲಿ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆ ಲಾಲ್‍ಬಾಗ್ ಹಾಗೂ ಕಬ್ಬನ್ ಉದ್ಯಾನಗಳ ಮುಂದೆ ವಾಯುವಿಹಾರಿಗಳು ಮಂಗಳವಾರ ಮುಂಜಾನೆ ಸಾಲುಗಟ್ಟಿ ನಿಂತಿದ್ದರು.

ಕೊರೊನಾ ಹರಡುವಿಕೆ ತಡೆಯುವ ಉದ್ದೇಶದಿಂದ ಲಾಕ್‍ಡೌನ್‍ಗೂ ಮುನ್ನವೇ ಉದ್ಯಾನಗಳನ್ನು ಮುಚ್ಚಲಾಗಿತ್ತು. ಎರಡು ತಿಂಗಳ ಬಳಿಕ ವಾಯುವಿಹಾರಕ್ಕೆ ಅನುವು ಮಾಡಿಕೊಟ್ಟ ಕಾರಣ, ಲಾಲ್‍ಬಾಗ್ ಉದ್ಯಾನದ ಪಶ್ಚಿಮ ದ್ವಾರ ಹಾಗೂ ಡಬಲ್ ರೋಡ್ ಪ್ರವೇಶ ದ್ವಾರಗಳ ಮುಂದೆ 4 ಸಾವಿರಕ್ಕೂ ಹೆಚ್ಚು ವಾಯುವಿಹಾರಿಗಳು ಸಾಲುಗಟ್ಟಿ ನಿಂತಿದ್ದರು.

‘ಒಳ ಪ್ರವೇಶಕ್ಕೂ ಮುನ್ನ ವಾಯುವಿಹಾರಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ, ಕೈಗಳಿಗೆ ಸ್ಯಾನಿಟೈಸರ್ ಹಾಕಲಾಯಿತು. ವಾಯುವಿಹಾರಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಯಿತು. ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವಂತೆ ಅವರಿಗೆ ಮನವರಿಕೆ ಮಾಡಿದೆವು. ವಾಯುವಿಹಾರ ಮಾಡಲಾರದೆ ಮನೆಯಲ್ಲೇ ಇದ್ದವರು ಉದ್ಯಾನವೆಲ್ಲ ಸಂಚರಿಸಿ, ಪರಿಸರವನ್ನು ಆನಂದಿಸಿದರು’ಎಂದು ಲಾಲ್‍ಬಾಗ್ ನಡಿಗೆದಾರರ ಸಂಘದ ಅಧ್ಯಕ್ಷ ರವಿಚಂದ್ರ ತಿಳಿಸಿದರು.

‘2 ಸಾವಿರಕ್ಕೂ ಹೆಚ್ಚು ಮಂದಿ ವಾಯುವಿಹಾರಿಗಳು ಕಬ್ಬನ್ ಉದ್ಯಾನ ಪ್ರವೇಶಿಸಿದರು. ತೋಟಗಾರಿಕೆ ಇಲಾಖೆ ವತಿಯಿಂದ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಇತ್ತು. ಆದರೆ, ಉದ್ಯಾನಕ್ಕೆ ಬರುವ ಬಹುತೇಕರು ಸ್ಥಳೀಯರೇ ಆಗಿರುವುದರಿಂದ ಕೊರೊನಾ ಸೋಂಕು ಹರಡುವಿಕೆ ಕುರಿತು ಇಲಾಖೆ ಜಾಗೃತಿ ಮೂಡಿಸಬೇಕು. ವಾಯುವಿಹಾರದ ವೇಳೆ ಸಿಬ್ಬಂದಿಯೇ ತಿಳುವಳಿಕೆ ನೀಡಬೇಕು’ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT