‘ಠಾಣೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನಿತ್ಯ ದ್ರಾವಣ ಸಿಂಪಡಿಸಬೇಕು. ಸಿಬ್ಬಂದಿಗೆ ಆರೋಗ್ಯ ಸಮಸ್ಯೆಯಾದರೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು. ಕರ್ತವ್ಯದ ವೇಳೆ ಸಿಬ್ಬಂದಿ ಸ್ಯಾನಿಟೈಸರ್, ಮಾಸ್ಕ್ ಬಳಸಬೇಕು. ಸೋಂಕು ತಗುಲಿದ ಸಿಬ್ಬಂದಿಯ ಆರೈಕೆಗೆ ಆಯಾ ಡಿಸಿಪಿಗಳು ಒತ್ತು ನೀಡಬೇಕು. ಸಿಬ್ಬಂದಿ ಹಿರಿಯ ಅಧಿಕಾರಿಗಳ ಲಿಖಿತ ಅಪ್ಪಣೆ ಇಲ್ಲದೆ ನಗರ ಬಿಟ್ಟು ಎಲ್ಲಿಗೂ ಹೋಗಬಾರದು’ ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.