‘ರಸ್ತೆಯಲ್ಲಿ ಮನೀಶ್ ನರಳುತ್ತಿ
ದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ದುಷ್ಕರ್ಮಿಯೊಬ್ಬ, ಮಚ್ಚಿನಿಂದ ಮನೀಶ್ ಅವರನ್ನು ಕೊಚ್ಚಿದ್ದ. ದೇಹದ
ಲ್ಲೆಲ್ಲ ರಕ್ತ ಸೋರುತ್ತಿತ್ತು. ನಂತರ ಆ ದುಷ್ಕರ್ಮಿ, ಮತ್ತೊಬ್ಬ ದುಷ್ಕರ್ಮಿ ಜೊತೆ ದ್ವಿಚಕ್ರ ವಾಹನದಲ್ಲಿ ಪರಾರಿಯಾದ. ನಂತರ ಮನೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇಅವರು ಮೃತಪಟ್ಟಿದ್ದಾರೆ. ಮನೀಶ್ ಅವರನ್ನು ಹಿಂಬಾಲಿಸಿ ಬಂದು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ’ ಎಂದೂ ದೂರಿನಲ್ಲಿ ಹೇಳಿದ್ದಾರೆ.