ಬೆಂಗಳೂರು: ಜಯನಗರ, ಸಾರಕ್ಕಿ, ಜಯದೇವ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯ ಇರುವುದರಿಂದ ಇದೇ 7ರಿಂದ 10ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ವ್ಯತ್ಯಯವಾಗುವ ಸ್ಥಳಗಳು: ಸೆ.7ರಂದು ಮಾರೇನಹಳ್ಳಿ, ಎಂಟಿಬಿ, ಗ್ರೇಪ್ ಗಾರ್ಡನ್, ಸೆ.8 ಮತ್ತು 9ರಂದು ಜಯನಗರದ 8ನೇ ಬ್ಲಾಕ್, 10ರಂದು ಬಿ.ಜಿ.ರಸ್ತೆ, ಎಸ್ಆರ್ಕೆ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.