ಬೆಂಗಳೂರು: ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಕೆಂಗೇರಿ ಉಪವಿಭಾಗ ವ್ಯಾಪ್ತಿಯಲ್ಲಿ ಇದೇ 19 ಮತ್ತು 20ರಂದು ಬೆಳಿಗ್ಗೆ 9ರಿಂದ ಸಂಜೆ 5ರ ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಕೆಂಗೇರಿ ಉಪನಗರ, ಬಿಎಂಟಿಸಿ ಹತ್ತಿರ, ಜೆ.ಬಿ. ಬಡಾವಣೆ, ಕೊಮ್ಮಘಟ್ಟ ರಸ್ತೆ, ದೊಡ್ಡಮಾರಮ್ಮನ ದೇವಸ್ಥಾನ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.