<p><strong>ಬೆಂಗಳೂರು:</strong> ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮವಾದ ‘ಪ್ರಜಾವಾಣಿ’ಯ ಹೆಸರಿನಲ್ಲಿ, ಅದರದ್ದೇ ಅಂತರ್ಜಾಲ ಪುಟದ ವಿನ್ಯಾಸವನ್ನೇ ನಕಲು ಮಾಡಿ ಸುದ್ದಿ ಹರಡುತ್ತಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.</p><p>‘ದೇಶದ ಅಭಿವೃದ್ಧಿಗೆ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗುವುದು ಅಗತ್ಯ: ಬಿಜೆಪಿ ವರಿಷ್ಠ ಸಿ.ಟಿ. ರವಿ’ ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದು ಪ್ರಕಟಗೊಂಡಿದೆ ಎಂದು ಕಿಡಿಗೇಡಿಗಳು ‘ಪ್ರಜಾವಾಣಿ’ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳನ್ನು ಹರಿಯಬಿಟ್ಟಿದ್ದಾರೆ. </p>.<p>ಇದನ್ನು ವಿಕಾಸ್ ನೇಗಿಲೋಣಿ ಎಂಬವರು ವರದಿ ಮಾಡಿರುವ ರೀತಿಯಲ್ಲಿ ತಿರುಚಿ ಪ್ರಕಟಿಸಲಾಗಿದೆ. ‘ಪ್ರಜಾವಾಣಿ ಕಥಾ‘ ಸ್ಪರ್ಧೆಯಲ್ಲಿ ವಿಕಾಸ್ ನೇಗಿಲೋಣಿ ಅವರ ‘ಅಂತಿಮ ಯಾತ್ರೆ’ ಎಂಬ ಕಥೆಗೆ ಮೆಚ್ಚುಗೆ ಪಡೆದ ಪ್ರಶಸ್ತಿ ಲಭಿಸಿದೆ. ಅದು ನ. 9ರಂದು ‘ಭಾನುವಾರ ಪುರವಣಿ’ ವಿಭಾಗದಲ್ಲಿ ಪ್ರಕಟಗೊಂಡಿತ್ತು. ಈ ಕಥೆಯ ಸ್ಕ್ರೀನ್ಶಾಟ್ ತೆಗೆದುಕೊಂಡು, ಕಿಡಿಗೇಡಿಗಳು ಶೀರ್ಷಿಕೆ ಮಾತ್ರ ಬದಲಿಸಿ ಹಂಚಿಕೊಂಡಿದ್ದಾರೆ. ಇಲ್ಲಿ ಬಳಸಿರುವುದು ಸಂಸ್ಥೆಯು ತಾನೇ ವಿಶಿಷ್ಟವಾಗಿ ವಿನ್ಯಾಸಗೊಳಿಸಿದ ಯುನಿಕೋಡ್ ಫಾಂಟ್ ಅಲ್ಲ ಎಂದು ‘ಪ್ರಜಾವಾಣಿ’ ಖಚಿತಪಡಿಸುತ್ತದೆ.</p><p>ವಿಕಾಸ್ ನೇಗಿಲೋಣಿ ಅವರು ಕಥೆಗಾರರೇ ಹೊರತು, ‘ಪ್ರಜಾವಾಣಿ’ಯ ವರದಿಗಾರರಲ್ಲ. ಇದೊಂದು ನಕಲಿ ಸುದ್ದಿಯಾಗಿದ್ದು, ಇದನ್ನು ‘ಪ್ರಜಾವಾಣಿ’ ಪ್ರಕಟಿಸಿಲ್ಲ.</p><p>ಓದುಗರು ವಿಶ್ವಾಸಾರ್ಹ ಸುದ್ದಿಗಳಿಗಾಗಿ ನೇರವಾಗಿ <a href="https://www.prajavani.net/">www.prajavani.net</a> ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮವಾದ ‘ಪ್ರಜಾವಾಣಿ’ಯ ಹೆಸರಿನಲ್ಲಿ, ಅದರದ್ದೇ ಅಂತರ್ಜಾಲ ಪುಟದ ವಿನ್ಯಾಸವನ್ನೇ ನಕಲು ಮಾಡಿ ಸುದ್ದಿ ಹರಡುತ್ತಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.</p><p>‘ದೇಶದ ಅಭಿವೃದ್ಧಿಗೆ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗುವುದು ಅಗತ್ಯ: ಬಿಜೆಪಿ ವರಿಷ್ಠ ಸಿ.ಟಿ. ರವಿ’ ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದು ಪ್ರಕಟಗೊಂಡಿದೆ ಎಂದು ಕಿಡಿಗೇಡಿಗಳು ‘ಪ್ರಜಾವಾಣಿ’ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳನ್ನು ಹರಿಯಬಿಟ್ಟಿದ್ದಾರೆ. </p>.<p>ಇದನ್ನು ವಿಕಾಸ್ ನೇಗಿಲೋಣಿ ಎಂಬವರು ವರದಿ ಮಾಡಿರುವ ರೀತಿಯಲ್ಲಿ ತಿರುಚಿ ಪ್ರಕಟಿಸಲಾಗಿದೆ. ‘ಪ್ರಜಾವಾಣಿ ಕಥಾ‘ ಸ್ಪರ್ಧೆಯಲ್ಲಿ ವಿಕಾಸ್ ನೇಗಿಲೋಣಿ ಅವರ ‘ಅಂತಿಮ ಯಾತ್ರೆ’ ಎಂಬ ಕಥೆಗೆ ಮೆಚ್ಚುಗೆ ಪಡೆದ ಪ್ರಶಸ್ತಿ ಲಭಿಸಿದೆ. ಅದು ನ. 9ರಂದು ‘ಭಾನುವಾರ ಪುರವಣಿ’ ವಿಭಾಗದಲ್ಲಿ ಪ್ರಕಟಗೊಂಡಿತ್ತು. ಈ ಕಥೆಯ ಸ್ಕ್ರೀನ್ಶಾಟ್ ತೆಗೆದುಕೊಂಡು, ಕಿಡಿಗೇಡಿಗಳು ಶೀರ್ಷಿಕೆ ಮಾತ್ರ ಬದಲಿಸಿ ಹಂಚಿಕೊಂಡಿದ್ದಾರೆ. ಇಲ್ಲಿ ಬಳಸಿರುವುದು ಸಂಸ್ಥೆಯು ತಾನೇ ವಿಶಿಷ್ಟವಾಗಿ ವಿನ್ಯಾಸಗೊಳಿಸಿದ ಯುನಿಕೋಡ್ ಫಾಂಟ್ ಅಲ್ಲ ಎಂದು ‘ಪ್ರಜಾವಾಣಿ’ ಖಚಿತಪಡಿಸುತ್ತದೆ.</p><p>ವಿಕಾಸ್ ನೇಗಿಲೋಣಿ ಅವರು ಕಥೆಗಾರರೇ ಹೊರತು, ‘ಪ್ರಜಾವಾಣಿ’ಯ ವರದಿಗಾರರಲ್ಲ. ಇದೊಂದು ನಕಲಿ ಸುದ್ದಿಯಾಗಿದ್ದು, ಇದನ್ನು ‘ಪ್ರಜಾವಾಣಿ’ ಪ್ರಕಟಿಸಿಲ್ಲ.</p><p>ಓದುಗರು ವಿಶ್ವಾಸಾರ್ಹ ಸುದ್ದಿಗಳಿಗಾಗಿ ನೇರವಾಗಿ <a href="https://www.prajavani.net/">www.prajavani.net</a> ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>