ಭಾರತವು ಸಮಾನತೆ, ಶಾಂತಿ ಹಾಗೂ ಸಾಮೂಹಿಕ ಜವಾಬ್ದಾರಿಯ ಪರಿಕಲ್ಪನೆ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿ 8 ದಶಕಗಳು ಕಳೆದಿವೆ. ಆದರೆ ಆ ಮೊದಲೇ ಆರಂಭಗೊಂಡಿದ್ದ ಸ್ವಾತಂತ್ರ್ಯ ಚಳವಳಿಯನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಡಿಯಲ್ಲಿ ಮುನ್ನಡೆಸಿದ ಹಿರಿಮೆ ಗಾಂಧೀಜಿ ಅವರಿಗೆ ಸಲ್ಲುತ್ತದೆ. ಅತ್ಯಂತ ಹುರುಪಿನಿಂದ ಸಾಗುತ್ತಿದ್ದ ಚೌರಿ ಚೌರ ಚಳವಳಿ ಹಿಂಸಾತ್ಮಕ ಸ್ವರೂಪ ಕಂಡುಕೊಂಡ ಮರುಕ್ಷಣವೇ ಚಳವಳಿಯನ್ನು ಗಾಂಧೀಜಿ ಸ್ಥಗಿತಗೊಳಿಸಿದರು. ಇಂತಹ ಮೇರು ವ್ಯಕ್ತಿತ್ವವನ್ನು ಎಲ್ಲರೂ ಅನುಸರಿಸಬೇಕು. ಸಂಸ್ಕೃತಿ ಮತ್ತು ಧರ್ಮ ಕಾಲ ಕಾಲಕ್ಕೆ ಬದಲಾಗಬೇಕಿರುವ ವಿಷಯಗಳು. ಜಡ್ಡುಗಟ್ಟಿ ನಿಂತರೆ ಅಪಾಯ ಎಂದು ಹೇಳಿದರು.