ಈ ವೇಳೆ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ವಕ್ತಾರ ಮಂಜುನಾಥ್ ಅದ್ದೆ, ’ಕೇಂದ್ರದ ಬಿಜೆಪಿ ಸರ್ಕಾರ ಇಡೀ ದೇಶದ ಜನರನ್ನು ತನ್ನ ಸುಳ್ಳುಗಳ ಮೂಲಕ ವಂಚಿಸುತ್ತಿದೆ. 2014 ರಲ್ಲಿ ಪೆಟ್ರೋಲ್ ಬೆಲೆ ₹ 84 ಇದ್ದಾಗ ನರೇಂದ್ರ ಮೋದಿ ಮತ್ತು ಅಮಿತ್ ಶಾ, ಕೆಂಪು ಕೋಟೆಯ ಎದುರು ಸೈಕಲ್ ತುಳಿದು ಪ್ರತಿಭಟನೆ ನಡೆಸಿದ್ದರು. ಆದರೆ, ಇಂದು ಇವರದೇ ನೇತೃತ್ವದ ಸರ್ಕಾರದಲ್ಲಿ ತೈಲದರ ₹ 100ಕ್ಕೆ ಏರಿದೆ. ಇದರಿಂದ ದೇಶದ ಜನರು ಗಂಭೀರ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ ಇದರಬಗ್ಗೆ ಒಂದು ಮಾತನ್ನೂ ಆಡದೆ ಮೌನವಹಿಸಿದ್ದಾರೆ‘ ಎಂದು ದೂರಿದರು.